ಸರ್ಕಾರಿ ಇಲಾಖೆಗಳು ಅವಸಾನದಂಚಿನಲ್ಲಿದ್ದವು. ಆಕಾಶವಾಣಿ, ದೂರದರ್ಶನ, BSNL, ಇಂಡಿಯನ್ ಪೋಸ್ಟ್ ಇತ್ಯಾದಿ. ಕಾರಣವಿಷ್ಟೆ ಸರ್ಕಾರಿ ಸಂಸ್ಥೆಗಳ ಸೇವೆಯ ಗುಣಮಟ್ಟ ಸಮಯಪಾಲನೆಯಲ್ಲಿ ಸಮಸ್ಯೆಗಳಿದ್ದವು. ಅದೆಲ್ಲವನ್ನು ದೂರವಿಟ್ಟು ಉತ್ಕೃಷ್ಟವಾದ ಸೇವೆ ಒದಗಿಸಿ ಮರಣದಂಚಿನಲ್ಲಿದ್ದ ಇಲಾಖೆಗಳಿಗೆ ಮತ್ತೊಮ್ಮೆ ನವಜೀವ ತುಂಬುವ ಕೆಲಸ ಸರ್ಕಾರ ಮಾಡಬೇಕಿತ್ತು. ಮೋದಿ ಸರ್ಕಾರ ಆ...
ಅಂಕಣ
ಮಾಡಿದ ಕೆಲಸ ನೋಡದೆ ಕೆಟ್ಟಿತು ! El que no mira, no suspira.
ನಾವೆಲ್ಲಾ ಯಾವುದೇ ಒಂದು ಕೆಲಸವನ್ನ ಬಹಳ ಖುಷಿಯಿಂದ ಶುರು ಮಾಡುತ್ತೇವೆ . ಆದರೆ ನಮ್ಮಲ್ಲಿ ಬಹಳ ಜನ ಅದೆ ಖುಷಿ ಮತ್ತು ಹುಮ್ಮಸ್ಸನ್ನ ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ಅಸಫಲವಾಗುತ್ತೀವಿ . ನಾವು ಕೈಗೆತ್ತಿಕೊಂಡ ಕೆಲಸ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ನೀಡಬೇಕಾದ ಗಮನ ನೀಡುತ್ತಲೆ ಇರಬೇಕು . ಶ್ರಮವಹಿಸಿ ಕೆಲಸ ಮಾಡಿ ಅದನ್ನ ಪೂರ್ಣಗೊಳಿಸಿದ ಮೇಲೂ...
ಮಹಿಳಾ ಸಶಕ್ತೀಕರಣ ಬಿಜೆಪಿಗೆ ಬದ್ದತೆಯ ವಿಷಯವೇ ಹೊರತು ಭಾಷಣದ ವಿಷಯವಲ್ಲ
ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸ್ತ್ರೀವಾದ (Women Empowerment, Gender Equality, Feminism) ಮುಂತಾದವುಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಾರದಲ್ಲಿರುವ ಶಬ್ದಗಳು, ಈ ಎಲ್ಲಾ ಶಬ್ದಗಳಿಗೆ ಸ್ವಲ್ಪ ಹೊರಾರ್ಥವಿದ್ದರೆ ಹೆಚ್ಚು ಇರುವುದು ಒಳಾರ್ಥ (Little Objective but more Subjective), ಬದ್ಧತೆಗೂ ಭಾಷಣಕ್ಕೂ ನಡುವಿನ ಅಂತರ ಮಸುಕಾಗುತ್ತಿರುವಾಗ...
ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಏಕೆ ಹೊರದಬ್ಬಬೇಕು?
ಮಯನ್ಮಾರ್ ಆಗ್ನೇಯ ಏಷ್ಯಾದಲ್ಲಿರುವ ಭಾರತದ ನೆರೆ ರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಮಯನ್ಮಾರ್, ಜಪಾನೀ ಪ್ರಭಾವದಿಂದ ಬರ್ಮಾ ಮತ್ತು ದೇಶೀಯವಾಗಿ ಬಾಮಾ ಎಂದು ಕರೆಯಲಾಗುವ ಮಯನ್ಮಾರ್ ಬೌದ್ಧಧರ್ಮೀಯರ ದೇಶ. ಇಲ್ಲಿ 87% ಜನ ಬೌದ್ಧ ಮತವನ್ನು ಅನುಸರಿಸಿದರೆ, 7% ಜನ ಕ್ರೈಸ್ತ ಮತವನ್ನೂ, 5% ಜನ ಇಸ್ಲಾಂ ಮತವನ್ನೂ, 2% ಜನ ಹಿಂದೂ ಮತವನ್ನೂ ಅನುಸರಿಸುತ್ತಾರೆ. ಅಧಿಕ...
ರಾಷ್ಟ್ರೀಯತೆ ನಮ್ಮ ನರನಾಡಿಗಳಲ್ಲಿ ಅವ್ಯಾಹತವಾಗಿ ಪಸರಿಸಲಿ
ಕಾಲ ಬದಲಾಗಿದೆ. ಹೌದು, ಇದು ಆಗಲೇಬೇಕಿತ್ತು. 2014ರ ಮೊದಲು ಕೆಲವು ವ್ಯಕ್ತಿಗಳ ಮೇಲಿನ ನನ್ನ ವೈಚಾರಿಕ ದೃಷ್ಟಿಕೋನ ಬೇರೆಯದೇ ಆಗಿತ್ತು ಮತ್ತು ಈಗ ಇವತ್ತಿನ ಸಮಯದಲ್ಲಿ ಆ ದೃಷ್ಟಿಕೋನ ಬದಲಾಗಿದೆ. 2014ರ ಮೊದಲು ಮೇಧಾ ಪಾಟ್ಕರ್ ಎಂದರೆ ಅಪ್ರತಿಮ ಪರಿಸರ ಹೋರಾಟಗಾರ್ತಿ ಎಂದುಕೊಂಡಿದ್ದೆ ನಾನು, 2014ರ ಮೊದಲು ಅರುಂಧತಿ ರಾಯ್ ಎಂದರೆ ಅಪ್ರತಿಮ ದೇಶಭಕ್ತೆ ಎಂದುಕೊಂಡಿದ್ದೆ...
ಗ್ರಾಮ ವಿಕಾಸದ ಕಲ್ಪನೆಗೆ ನಾಂದಿ ಹಾಡಿದ ದಿಟ್ಟ ಮಹಿಳೆ
‘ಕಡ್ಡಾಯವಾಗಿ ಹಸಿಕಸವನ್ನು ಮತ್ತು ಪ್ಲಾಸ್ಟಿಕ್ನ್ನು ಬೇರ್ಪಡಿಸಿ ಕೊಡಿ, ಇಲ್ಲದಿದ್ದರೇ ನಿಮ್ಮ ಮನೆಯಿಂದ ತ್ಯಾಜ್ಯ ವಸ್ತುಗಳನ್ನೇ ವಿಲೇವಾರಿ ಮಾಡುವುದಿಲ್ಲ’ ಈಗೆನ್ನುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಲ್ಯಾಲ ಗ್ರಾಮದ ಮಹಿಳೆಯೊಬ್ಬರು ಸಮಗ್ರ ಗ್ರಾಮವನ್ನು ಸ್ವಚ್ಚ, ಸುಂದರ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವ ಕಲ್ಪನೆಯೊಂದಿಗೆ ವಿನೂತನವಾದ ಸಾಮಾಜಿಕ...
ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆಂದರೆ…
ಅಕ್ಟೋಬರ್ 5, 2017ರಂದು ಪ್ರಜಾವಾಣಿಯ “ವಿಜ್ಞಾನ ವಿಶೇಷ” ಅಂಕಣದಲ್ಲಿ “ನಿಸರ್ಗ ಪ್ರಕೋಪಗಳು ನೈಸರ್ಗಿಕವೇ ಅಲ್ಲ!” ಎಂಬ ಶೀರ್ಷಿಕೆಯ ಲೇಖನ ಪ್ರಕಟವಾಗಿತ್ತು. ಅದನ್ನು ಓದುತ್ತ ಹೋದಾಗ ನನಗನ್ನಿಸಿದ್ದು “ಒಂದು ಕೆಟ್ಟ ವಿಜ್ಞಾನ ಲೇಖನ ಹೇಗಿರುತ್ತದೆ” ಎಂದು ತೋರಿಸಲಿಕ್ಕಾದರೂ ಈ ಲೇಖನ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ;...
ನಮ್ಮ ದೇಶದ ಇತಿಹಾಸ ಓದಿ ಹೆಮ್ಮೆ ಎನಿಸಲಿಲ್ಲ
ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ನಮ್ಮ ಪ್ರೊಫೆಸರ್ ಇಂಡಿಯನ್ ಸೈಕಾಲಜಿಯ ಬಗ್ಗೆ ಪಾಠ ಮಾಡುತ್ತಿದ್ದರು. ಸೈಕಾಲಜಿ ಅಂದ ಮೇಲೆ ಮುಗಿಯಿತು ಮತ್ತೆ ಅದರಲ್ಲಿ ಇಂಡಿಯನ್ ಸೈಕಾಲಜಿ ಅನ್ನುವುದು ಯಾಕೆ ಬೇಕು ಎನ್ನುವುದರ ಕುರಿತು ಹೇಳುತ್ತಾ ತಮ್ಮ ಅನುಭವವೊಂದನ್ನ ನಮ್ಮೊಂದಿಗೆ ಹಂಚಿಕೊಂಡರು. ಅವರು ಆಗ ತಾನೆ ತಮ್ಮ ಓದು ಮುಗಿಸಿ, ‘ಆಲ್ಟರ್ಡ್ ಸ್ಟೇಟ್ ಆಫ್ ಕಾನ್ಶಿಯಸ್’ನೆಸ್’...
ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – 2
ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧ ಸತ್ಯವೇನು? ಬಹುತೇಕ ಎಲ್ಲ ರೈತರೂ ತಮ್ಮ ಮುಂಗಾರು ಬೆಳೆಯನ್ನು ಜುಲೈ ಕೊನೆಯ ವೇಳೆಗೂ, ಹಿಂಗಾರನ್ನು ಡಿಸೆಂಬರ್ ಕೊನೆಯ ವೇಳೆಗೂ ಬಿತ್ತಿದ್ದರು. ಇಲ್ಲಿ ಬಂದಿರುವ ಪ್ರಶ್ನೆ ಎಂದರೆ ಬೀಜ ಬಿತ್ತುವ ಅವಧಿ ಮುಗಿದ ಮೇಲೆ ಜಾರಿಗೊಳ್ಳಬಹುದಾದ ವಿಮೆ, ಬೀಜ ಬಿತ್ತುವ ಮೊದಲಿನ ಅವಧಿಯ ಸಂಕಷ್ಟವನ್ನು ಹೇಗೆ ಕವರ್ ಮಾಡುತ್ತದೆ...
ಗೆಲುವಿನ ಸಂಭ್ರಮಕ್ಕೆ ನರರಕ್ತದ ಔತಣ; ಇದುವೇ ಕೆಂಪು ಭಯೋತ್ಪಾದನೆಯ ಮರ್ಮ
ಬಿಜೆಪಿಯು ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆಯು ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದನ್ನು ನೀವು ಈಗಾಗಲೇ ತಿಳಿದಿರಬಹುದು. ಕಮ್ಯುನಿಸ್ಟರ ಕೆಂಪು ಭಯೋತ್ಪಾದನೆಯನ್ನು ಇಲ್ಲವಾಗಿಸುವುದೇ ಪ್ರತಿಭಟನೆಯ ಮೂಲ ಉದ್ದೇಶ. 2016ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಗೆದ್ದಮೇಲಷ್ಟೇ ಹಿಂಸಾಚಾರ ಭುಗಿಲೆದ್ದಿರುವುದಲ್ಲ. ಪಿಣರಾಯಿ ವಿಜಯನ್ ಗೆದ್ದ ನಂತರ...