ಕಥೆ

ಡಿಟೆಕ್ಟಿವ್ ಜಿಕೆ : ಕಲೆ ( ಮುಕ್ತಾಯ )

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)

 

ನಿಧಾನವಾಗಿ ಕಣ್ಣು ತೆರೆದೆ , ಎದ್ದು ಕೂರಲು ಆಗದಷ್ಟು ಬೆನ್ನು ನೋಯುತ್ತಿತ್ತು . ಕೆಲ ಹೊತ್ತಿನಲ್ಲಿ ವಿಕ್ರಮ್ ಹಾಗೂ ಡಾಕ್ಟರ್ ನನ್ನೆದುರು ಬಂದು ಕುಳಿತರು . ಆ ನೋವಿನಲ್ಲೂ ನನಗೆ ಆತ ಯಾರು ? ಯಾಕೆ ಬಂದ ಎಂಬ ಪ್ರಶ್ನೆಗಳೇ ಕಾಡುತಿತ್ತು . ಆತನೂ ಅದೇ ಆಸ್ಪತ್ರೆಯಲ್ಲಿ ಇದ್ದಾನಂತೆ , ಇನ್ನೂ ಪ್ರಜ್ಞೆ ಬಂದಿರಲಿಲ್ಲ . ಎದ್ದು ಹೋಗಿ ಅವನನ್ನು ಎಬ್ಬಿಸಿಬಿಡುವ ಎನಿಸುತಿತ್ತು . ಔಪಚಾರಿಕ ಮಾತು-ಕತೆ ಮುಗಿಸಿ ವಿಕ್ರಮ್ ಹೊರಟು ಹೋದರು , ಮತ್ತೆ ಮೌನ ಆವರಿಸಿತು . ನನಗೆ ಮತ್ತೆ ನಿದ್ದೆ ಹತ್ತಿತು .

ಹೀಗೆ ಎರಡು ದಿನ ಕಳೆದೆ , ಈಗ ನನಗೆ ನೋವು ಕಡಿಮೆಯಾಗಿತ್ತು . ಎದ್ದು ಓಡಾಡುತ್ತಿದ್ದೆ , ಹತ್ತೋ ಇಪ್ಪತ್ತೋ ಪುಶ್ ಅಪ್ಸ್ ಮಾಡಿದೆ . ಮೊದಲಿನಂತೆ ಆಗದಿದ್ದರೂ ಸ್ವಲ್ಪ ಚೈತನ್ಯ ಬಂತು . ಆತನಿಗೂ  ಪ್ರಜ್ಞೆ ಬಂತು ಎಂದು ವಿಕ್ರಮ್ ತಿಳಿಸಿದರು . ಇಬ್ಬರೂ ನನ್ನ ವಾರ್ಡಿನಿಂದ ಹೊರ ಬಿದ್ದೆವು .
ಆತ ಎದ್ದು ಕುಳಿತಿದ್ದ , ವಿಕ್ರಮ್ ಇನ್ಟರಾಗೆಶನ್ ಶುರು ಮಾಡಿದರು . ನೇರ ಪ್ರಶ್ನೆಗಳು
” ಯಾರು ನೀನು ? ಯಾಕೆ ಹೀಗ್ ಮಾಡ್ದೆ ? “
ಆತ ಕಿಟಕಿಯ ಆಚೆ ನೋಡುತ್ತಿದ್ದ , ಯಾವುದೇ ಪ್ರತಿಕ್ರಿಯೆ ನೀಡದೆ . ನಾನು ವಿಕ್ರಮ್ ಅವರ ಮುಖ ನೋಡಿದೆ . ಅವರಿಗೆ ಅರ್ಥವಾಯಿತು . ಅವರು ಆಚೆ ಎದ್ದು ಹೋದರು . ನಾನು ನನ್ನ ಪಿಸ್ಟಲ್ ಲೋಡ್ ಮಾಡಿಕೊಂಡೆ . ಸೀದಾ ಆತನ ಹಣೆಗೆ ಗುರಿಯಿಟ್ಟೆ . ಆತನಿಗೆ ಆಗಿದ್ದ ಗಾಯದ ಮೇಲೆ ಗುದ್ದಿದ್ದೆ , ಆತ ನೋವಿನಿಂದ ಚೀರಿದ .
” ನನ್ ಮೇಲೆ ಯಾವ ಕೇಸು ನಡೆಯೋಲ್ಲ , 0.6mm ಬುಲೆಟ್ ಹತ್ತಿರದಿಂದ ಹೊಡೆದರೆ ನಿನ್ನ ಮೆದುಳು ಸೀಳಿ ಆಚೆ ಇಂದ ಹೊರಗ್ ಹೋಗುತ್ತೆ . ಪೋಸ್ಟ್ ಮಾಟಂ ಸಹ ಮಾಡಿಸ್ದೆ ದಫ಼ನ್ ಮಾಡ್ತೀನಿ ” ಎಂದು ಘರ್ಜಿಸಿದೆ . ಆಗ ಬಾಯಿ ಬಿಟ್ಟ .
ಆತನ ಹೆಸರು ವಿವೇಕ್ , ಆತನೂ ಸಹ ಬಳ್ಳಾರಿಯಲ್ಲಿ ಮೆಡಿಕಲ್ ಓದುತ್ತಿದವ . ಸ್ನೇಹಾಳ ಗೆಳೆಯ . ಬಾಲ್ಯ ಸ್ನೇಹಿತ . ಅದಾಗಲೇ ಸ್ನೇಹ ಪ್ರೀತಿಗೆ ತಿರುಗಿತ್ತು . ಆದರೆ ಮೆಡಿಕಲ್ ಸೇರಿದ ಮೇಲೆ ಸ್ನೇಹಾಳಿಗೆ ಚಿರಾಗ್ ಸಂಬಂಧ ಹೆಚ್ಚಾಗಿತ್ತು .ಬಡತನದಲ್ಲೇ ಬೆಳೆದ ಅವಳಿಗೆ ಸಹಜವಾಗೇ ಶ್ರೀಮಂತಿಕೆಯ ಮೇಲೆ ಮೋಹ ಶುರುವಾಗಿತ್ತು . ಚಿರಾಗ್ ಸಹ ಅವಳನ್ನು ಬಳಸಿಕೊಳ್ಳುತ್ತಿದ್ದ , ನಿಜವಾಗಿಯೂ ಪ್ರೀತಿಸುತ್ತಿದ್ದನಾ ಗೊತ್ತಿಲ್ಲ ? . ಆದರೆ ಆತನ ಡೈಮಂಡ್ ಸ್ಮಗ್ಲಿಂಗ್ ಗೆ ಒಂದು ಹುಡುಗಿ ಬೇಕಿತ್ತು . ಚಿರಾಗ್ ಆಕೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಳ್ಳುತ್ತಿದ್ದನಂತೆ . ಇದರಿಂದ ಆತನ ಮೇಲಿನ ಅನುಮಾನ ಕಡಿಮೆ ಆಗುತಿತ್ತು . ಫ್ಯಾಮಿಲಿ ಎಂದಾಗ ಪೊಲೀಸರು ಹೆಚ್ಚು ಅನುಮಾನಿಸುವುದಿಲ್ಲ .
ಆದರೆ ವಿವೇಕ್ ವ್ಯಗ್ರನಾಗುತ್ತಾ ಹೋದ . ಹಿ ಹ್ಯಾಸ್ ದಿ ಮೊಟಿವೆಶನ್ . ಆತ ಬೆಂಗಳೂರಿಗೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ . ಅವಕಾಶವನ್ನು ಬಳಸಿಕೊಂಡಿದ್ದ , ಕಿಚನ್ ನೈಫ್ ಬಳಸಿ ಕೊಲೆ ಮಾಡಿದ್ದ . ನಂತರ  ನನ್ನ ಹೇಳಿಕೆಯಿಂದ ತಲೆ ಕೆಡಿಸಿಕೊಂಡಿದ್ದ . ನನ್ನನ್ನೇ ಮುಗಿಸುವುದು ಒಂದೇ ಅವನಿಗೆ ಉಳಿದದ್ದು .
ವಿವೇಕ್ ಗೆ ವಜ್ರದ ವಿಷಯ ಗೊತ್ತೇ ಇರಲಿಲ್ಲ . ವಜ್ರದ ಬಗ್ಗೆ ಸವಿವರವಾಗಿ ರಾ ಸಂಸ್ಥೆಗೆ ಬರೆದೆ . ಕುರೇಷಿಯೊಂದಿಗೆ ನಾನು ಒಬ್ಬನೇ ಏನೂ ಮಾಡಲು ಸಾಧ್ಯವಿರಲಿಲ್ಲ . ಆತ ಭಾರತಕ್ಕೆ ಕಾಲಿಟ್ಟಿದ್ದು ಕಳವಳಕಾರಿ ಬೆಳವಣಿಗೆ .
ಆಸ್ಪತ್ರೆಯಿಂದ ಹೊರಬಿದ್ದೆ ಪತ್ರಕರ್ತರ ಕ್ಯಾಮೆರಾ ಸದ್ದು ಮಾಡಿತು . ನಾನು ಗುಂಡು ಬಿದ್ದ ಜಾಗದಲ್ಲಿ ಆಗಿದ್ದ ಕಲೆಯನ್ನು ಮುಟ್ಟಿಕೊಂಡೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Gurukiran

ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!