ಕಥೆ

ಸಾಸಿವೆ ತಂದವನು …..

ನಾನು ಆಫೀಸಿನಲ್ಲಿ ಬ್ಯುಸಿ ಆಗಿದ್ದಾಗ ನನ್ನ ಫೋನ್ ರಿಂಗಣಿಸಿತು . ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ತಕ್ಷಣವೇ ಆಸ್ಪತ್ರೆಗೆ ಓಡಿ ಬಂದೆ . ನೀನೆಂದೂಆಸ್ಪತ್ರೆಯ ಕಡೆಗೆ ಮುಖ ಮಾಡಿದವಳೇ ಅಲ್ಲ ಅಮ್ಮ !. ICU ಕೋಣೆಯೊಳಗೆ ಇಣುಕಿ ನೋಡಿದೆ ,ನನ್ನೆಡೆಗೆ ಒಂದು ಕ್ಷೀಣ ನಗು. ನಾನು ಮತ್ತೆ ಮಗುವಾಗಿಹೋದೆ  ಅಮ್ಮ ,ಗಳ ಗಳನೆ ಅತ್ತು ಬಿಟ್ಟೆ . ಐದಾರು  ವೈದ್ಯರ ತಂಡ ನಿನ್ನ ಕೇಸ್  ಬಗ್ಗೆ ಮಾತನಾಡುತ್ತಿದ್ದರು. ನಿನ್ನ ಖಾಯಿಲೆಗೆ ಉದ್ದುದ್ದ ಹೆಸರು ,ನನಗೆಅದ್ಯಾವುದೂ ಬೇಡ ,ನೀನು ಬೇಕು ,ಬರಿ ನೀನು ……

ಒಂದು ಗಡ್ಡೆ ನಿನ್ನ ಮಿದುಳಿನ ತುಂಬಾ ಹರಡಿ ನಿಂತಿತ್ತು . ಒಂದಲ್ಲ ಎರಡು ಅಲ್ಲಲ್ಲ ಮೂರು. ತೀವ್ರ ಪರೀಕ್ಷೆಯ ನಂತರ ಗೊತ್ತಾಗ ತೊಡಗಿತ್ತು . ಕೆಲವೇ ದಿನಗಳಲ್ಲಿ ಆಪರೇಷನ್ ಮಾಡಬೇಕಾಗಿತ್ತು . ನನ್ನೆಲ್ಲಾ ಉಳಿತಾಯ ,ಇನ್ಸೂರೆನ್ಸ್ ಎಲ್ಲ ಹಣವನ್ನು ಒಟ್ಟುಗೂಡಿಸಿ ಕೊಟ್ಟದ್ದಾಯಿತು . ನಿನ್ನ ಮೇಲೆ ಒಂದಲ್ಲ,ಎರಡಲ್ಲ  ಏಳು ಮೇಜರ್ ಆಪರೇಷನ್ ಆದವು . ಆ ನಿನ್ನ ಪುಟ್ಟ ದೇಹ ಅದನ್ನು  ತಡೆದುಕೊಂಡಿದ್ದಾದರು ಹೇಗೆ ?. ಆ ಕೆಲವಾರು ತಿಂಗಳು ನಾನು ಹೇಗೆಬದುಕಿದ್ದೆನೊ ಗೊತ್ತಿಲ್ಲ ,ಅಥವಾ ಜೀವಂತ ಶವವಾಗಿದ್ದೆ .ಆಧ್ಯಾತ್ಮದ ಕಡೆಗೆ ವಾಲತೊಡಗಿದ್ದೆ.

ಆ ಒಂದು ರಾತ್ರಿ ಮಾತ್ರ ನನ್ನ ಜೀವನದಲ್ಲಿ ಮರೆಯದೆ ಉಳಿದು ಬಿಟ್ಟಿದೆ . ಮತ್ತೆ ನಿನ್ನ ICU ಗೆ ಶಿಫ್ಟ್ ಮಾಡಿದ್ದರು . ಜೀವನ್ಮರಣದ ಹೋರಾಟದಲ್ಲಿ ಇದ್ದೆನೀನು . ಆ ಗಾಬರಿಯ ಓಡಾಟ , ಆ ಔಷಧಿಯ ಬಾಟಲಿಗಳು …… ಸತತ ಎಂಟು ತಾಸುಗಳ ಹೋರಾಟಕ್ಕೆ ಜಯ ದೊರೆತಿತ್ತು . ಕೊನೆಗೂ ನೀನು ಬಂದೆ ,ಸಾವಿನೀಚೆಗೆ ಕಾಲಿಟ್ಟು ಒಳ ಬಂದೆ .

ಈಗ ವಾರ್ಡ್ಗೆ ಶಿಫ್ಟ್ ಮಾಡಿದ್ದರು ನಿನ್ನ . ಕಿಮೋಥೆರಪಿ ಶುರುವಾಗಿತ್ತು . ಮಾರುದ್ದ ಮಲ್ಲಿಗೆ ಮುಡಿಯುತ್ತಿದ್ದ ನಿನ್ನ ಕೂದಲು ಮಾಯವಾಗಿತ್ತು . ನಿನ್ನ ದೇಹಮುಂಚಿನ ಅರ್ಧದಷ್ಟು ಆಗಿಹೋಗಿತ್ತು . ಆದರು ನೀನೆ ಗೆದ್ದುಬಿಟ್ಟೆ . ಕದ ತಟ್ಟಿ ಒಳಗೆ ಬರಲೇ ? ಎಂದು ಕೇಳಿದ ಸಾವನ್ನು ನನಗೆ ಕೆಲಸವಿದೆ ಹೋಗು ಎಂದುಒದ್ದೋಡಿಸಿದ್ದೆ .

ಆದರೂ ಮನೆಯಲ್ಲಿ ನಿನ್ನ ನಗುವಿಲ್ಲ , ಗೆಜ್ಜೆಯ  ದನಿಯಿಲ್ಲ . ನಿನ್ನ ಇರವನ್ನು ತೋರಿಸುತ್ತಿದ್ದದ್ದು ಎಲೆಕ್ಟ್ರಾನಿಕ್ಸ್ ಉಪಕರಣಗಳ ‘ಬ್ಲಿಪ್ ‘ ಶಬ್ದ ಮಾತ್ರ .ಕೊನೆಗೂ ಚಿಕೆತ್ಸೆ ಮುಗಿದಿತ್ತು . ನಿನ್ನ ಮಿದುಳಿಗೆ ಕೆಲವು ಕಡೆ ಗಾಯವಾಗಿ ಹೋಗಿತ್ತು . ನೀ ನನ್ನ ಸಾಕಿದಂತೆ ನಾ ನಿನ್ನ ಸಾಕಬೇಕಿತ್ತು . ನೀನು ನೂರಕ್ಕೆನೂರರಷ್ಟು ನನ್ನ ಮೇಲೆ ಅವಲಂಬಿ .

ಅಡಿಗೆ ಮನೆಗೆ ಕಾಲೇ ಇಟ್ಟಿರದ ನಾನು ಅಡಿಗೆ ಮಾಡುವುದು ಕಲಿತೆ . ದೀಪಾವಳಿಯಂದು ನಾನು ಮಾಡಿದ ಹೋಳಿಗೆ ತಂದಿಟ್ಟಾಗ ನಿನ್ನ ಕಣ್ಣಂಚಲ್ಲಿ ನೀರುಬಂದಿತ್ತು . ಮನೆಯಲ್ಲಿ ಸ್ಮಶಾನ ಮೌನ ನನಗೆ ಅಸಹನೀಯ ಆಗತೊಡಗಿತ್ತು .

ನಿನ್ನ ಕೈಗೆ ಪೆನ್ನು ಕೊಟ್ಟು ಬರಿ ,ಬರಿ ಎಂದು ಹೇಳುವೆ . ನೀನು  ಗೀಚಿದ ಗೆರೆಗಳಲ್ಲಿ ನನ್ನದು ಅಕ್ಷರ ಹುಡುಕುವ ಸಾಹಸ.

ನಿನ್ನ ಮ್.. ಮ್ ಶಬ್ದದಲ್ಲಿ ನನ್ನ ಹೆಸರು ಕೆಳುತ್ತಿದೆಯೇ ಎಂದು ನೋಡುತ್ತಿದೇನೆ. ಅದೆಷ್ಟೋ ದೀಪಾವಳಿ ,ಸಂಕ್ರಾಂತಿಗಳು ಕಳೆದು ಹೋಗುತ್ತಿದೆ ……

*********************************************************************************

ಹದಿನೈದು ವಸಂತಗಳು ಕಳೆದು ಹೋಗಿದೆ . ಆದರೆ ವಿಶುವಿನ ನಿಷ್ಠೆ ಮಾತ್ರ ಕಡಿಮೆ ಆಗಿಲ್ಲ . ಬಹುಶಃ ಕಡಿಮೆಯೂ ಆಗುವುದಿಲ್ಲ . ಸಾವಿರದ ಮನೆಯಿಂದಸಾಸಿವೆ ತರುವ ಪ್ರಯತ್ನದಲ್ಲಿದ್ದಾನೆ ….

-Gurukiran

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!