ಅಂಕಣ

ಜಲಿಯನ್-ವಾಲಾ-ಬಾಗ್ ಹತ್ಯಾಕಾಂಡ: 13-04-1919

ಬ್ರಿಟಿಷರ ಅಟ್ಟಹಾಸ-ಗುಂಡಿನ ಬೋರ್ಗರೆವ ಮಳೆ-ಸಾವಿರಾರು ಅಮಾಯಕರ ಆಕ್ರಂದನ-ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು-ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನ..
​ಇವನೆಲ್ಲಾ ​​ನೆನಸಿಕೊಂಡರೆ ಮೈ ಜುಂ ಎನ್ನುವುದರಲ್ಲಿ ಸಂಶಯವಿಲ್ಲ..
​ಭಾರತದ ಇತಿಹಾಸದಲ್ಲೇ ಇದೊಂದು ಎಂದೂ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವಾತಂತ್ರಪೂರ್ವ ಬ್ರಿಟಿಷರ ದಬ್ಬಾಳಿಕೆ ಹೇಗಿತ್ತು ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ಸಾವಿರಾರು ಅಮಾಯಕರನ್ನು ನಾಲ್ಕು ಗೋಡೆಗಳ ಮದ್ಯೆ ಭೀಕರವಾಗಿ ನರಸಂಹಾರಗೈದು, ಅಟ್ಟಹಾಸದಿ ಹೇಡಿತನ ಮೆರೆದ ಬ್ರಿಟಿಷರ ಈ ಕಾಂಡವೇ ‘ಜಲಿಯನ್-ವಾಲಾ-​ಬಾಗ್ ಹತ್ಯಾಕಾಂಡ​.​​

ಹೌದು!

ಪಂಜಾಬಿನಲ್ಲಿ ಸುಮಾರು ೯೬ ವರ್ಷಗಳ ಹಿಂದೆ ನಡೆದ ಘಟನೆ. ಅಂದು ಭಾನುವಾರ​, ಏಪ್ರಿಲ್ 13​, ​1919​. ಸಮಯ ​4​ ಘಂಟೆ-​30​ ನಿಮಿಷ​.​ ವೈಶಾಖಿ ಪೂರ್ಣಿಮಾ ದಿನವಾದ ಅಂದು, ಸಿಖ್ ಸಮುದಾಯದವರು ಜಲಿಯನ್-ವಾಲಾ-​ಬಾಗ್ ಎಂಬ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದ ಅವರುಗಳ ಮೇಲೆ ಬ್ರಿಟಿಷರ ಕೆಂಗಣ್ಣು ಬಿದ್ದಿತ್ತು.​ ​ಇದು ಅವರ ವಿರುದ್ಧ ಪಿತೂರಿಯತ್ನ ರಚಿಸಲು ಸೇರಿರುವ ಸಭೆ ಇರಬಹುದೆಂದು ಲೆಕ್ಕಿಸಿ, ವಿಚಾರಿಸದೆ ತನ್ನ ಸೈನ್ಯದೊಂದಿಗೆ ಒಳ ನುಗ್ಗಿದ ಜನರಲ್ ಡಯಾರ್ ಎಂಬಾತ ಏಕಾ-ಏಕಿ ಗುಂಡಿನ ಮಳೆಗಯ್ಯಲು ಆದೇಶಿಸಿದ. ಅಲ್ಲಿರುವ ಒಂದೇ ಒಂದು ಬಾಗಿಲಿನಿಂದ ನುಗ್ಗಿದ ಈ ​150​ ಜನರ ಸೇನೆ, ನಾಲ್ಕು ದಿಕ್ಕುಗಳಲ್ಲಿಯೂ ತನ್ನ ಸರ್ಪಗಾವಲನ್ನು ಪಸರಿಸಿ ಬರೋಬ್ಬರಿ​ ​1650 ಗುಂಡುಗಳನ್ನು ಹಾರಿಸಲ್ಪಟ್ಟಿತು.​ ​ಗುಂಡಿನಿಂದ ತಪ್ಪಿಸಿಕೊಳ್ಳಲು ಕೆಲವರು​ ​ಗೋಡೆ ಏರಿ​ ​ವಿಫಲ ಪ್ರಯತ್ನ ಪಟ್ಟರೆ​, ತಾಯಂದಿರು ಮಕ್ಕಳೊಂದಿಗೆ ಬಾವಿಯೊಳಗೆ ಜಿಗಿದು ಪ್ರಾಣ ತ್ಯಜಿಸಿದರು. ಮಹಿಳೆಯರು, ಮಕ್ಕಳು, ಅಮಾಯಕರೆಂಬುದನ್ನು ಲೆಕ್ಕಿಸದೆ ನರಸಂಹಾರ ನಡೆಸಿದ ಬರ್ಬರ ಘಟನೆ ಅದಾಗಿತ್ತು.​ ಅಲ್ಲಿದ್ದ ಎಲ್ಲರೂ ಹತರಾಗಿದ್ದರು​ ಎಂಬುದು ವಿಷಾದನೀಯ.​​

​​​ಸೂತಕದ ಛಾಯೆಯ ಮದ್ಯೆ ಹಠ ಹಿಡಿದು ಅಲ್ಲಿಗೆ ತನ್ನ ತಂದೆಯೊಂದಿಗೆ ಧಾವಿಸಿದ ​​ಒಬ್ಬ​ ​​​ಪುಟಾಣಿ ಪೋರ ಛಿದ್ರ-ಛಿದ್ರಗೊಂಡ ದೇಹಗಳನ್ನು ದುರುಗುಡುತ್ತ ನಿಂತ.​ ​ಸ್ವತ:​ ​​ಕುಟುಂಬವೆಂದು ನಂಬಿದ್ದ ​​ಭಾರತೀಯರನ್ನು ಆತ ಕಳೆದುಕೊಂಡಿದ್ದ.​ಅವನ ಭಾವನೆ ಹೇಳತೀರದು. ​​ಮನಸ್ಸಿನ ​​ಭಾವನೆಯನ್ನು ತಡೆ ಹಿಡಿದ ಆತ ​ಒಂದು ಹನಿ ಕಣ್ಣೀರು ಇಡಲಿಲ್ಲ, ಬದಲಾಗಿ ಆ ರಕ್ತದಲ್ಲಿ ಒಂದಾದ ಮಣ್ಣನ್ನು ಕೈಯಲ್ಲಿ ಹಿಡಿದು ಈ ಭಾರತದಿಂದ ಬ್ರಿಟಿಷರನ್ನು ಓಡಿಸುವ ಪಣತೊಟ್ಟ. ಈ ​ಛಲವಾದಿ ಬೇರಾರು ಅಲ್ಲ, ಮುಂದೊಂದು ದಿನ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಸಾಕ್ಷಾತ್ ಕೆಚ್ಚೆದೆಯ ​’ಭಗತ್ ಸಿಂಗ್’. ಅವನಲ್ಲಿ ದೇಶಭಕ್ತಿಯ ಕಿಚ್ಚು ಎಷ್ಟು ಹೊತ್ತಿ ಉರಿಯುತ್ತಿತ್ತು ಎನ್ನುವುದಕ್ಕೆ ಇದೆ ಸಾಕ್ಷಿ. ​ಅಂದು ​​​ಈ ಜಲಿಯನ್​​-​ವಾಲಾ​​​-​ಬಾಗ್ ಘಟನೆ ಭಗತ್ ನಂತಹ ಸಾವಿರಾರು ಯುವಕರ ಮನಸಲ್ಲಿ ಕ್ರಾಂತಿಯ ರೂಪು ಹೊತ್ತಿಸ್ಸಿದ್ದು ಎಂದರೆ ಸುಳ್ಳಾಗಲಾರದು.​ ​

ಈ ಹತ್ಯಾಕಾಂಡಕ್ಕೆ ​ಇಂದು ​​​ವರ್ಷಗಳೇ ಸಂದಿವೆ. ಅಂದು ​ಬ್ರಿಟಿಷರ ದಬ್ಬಾಳಿಕೆಗೆ ಹುತಾತ್ಮರಾದ ಎಲ್ಲಾ ​ಭಾರತೀಯರನ್ನು ನೆನೆಸುತ್ತಾ, ನಾವು ಈ​ ​ಪೀಳಿಗೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರ​, ಅತ್ಯಾಚಾರದಂತಹ​ ​​ಕೆಟ್ಟ ವಿಚಾರಧಾರೆಗಳನ್ನು ಮೂಲ ಸಮೇತ ಕಿತ್ತೊಗೆಯುವ ಪ್ರಯತ್ನ ಮಾಡುವ ಪಣ ತೊಡುವಾ.

​ದೇಶವನ್ನು ಉನ್ನತ ಹಾದಿಯತ್ತ ​ಕೊಂಡೊಯುತ್ತ​.​.

​ಸರ್ಫ್ ರೋಷಿ ಕೀ ತಮನ್ನಾ
ಅಬ್ ಹಮಾರೆ ದಿಲ್ ಮೇ ಹೇ​,​
ದೇಖ್ ನಾಯೇ ಝೋರ್ ಕಿತನಾ
ಬಾಜು-ಎ-ಖಾತಿಲ್ ಮೇ ಹೇ​..​
‘ಇನ್ಕಿಲಾಬ್ ಜಿಂದಾಬಾದ್’

Facebook ಕಾಮೆಂಟ್ಸ್

ಲೇಖಕರ ಕುರಿತು

Harshad Uday Kamath

Founder of YuvaArt & Working as R & D Head in a Private company at Dharwad. His interest falls in Photography, Painting, Digital Design & Web Designing.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!