Featured ಅಂಕಣ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 3: ಭಾರತದ ಮುಂದಿರುವ ಡೊಕ್ಲಮ್ ಸವಾಲು; ಚೀನಕ್ಕೆ ಡೊಕ್ಲಮ್‍ನಲ್ಲಿ ಹೋದ ಮಾನ ಕಾಲಾಪಾನಿಯಲ್ಲಿ ದೊರೆತೀತೆ?

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 2 

ಡೊಕ್ಲಮ್, ಭಾರತಭೂತಾನ್ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ.

ಮೂರೂ ದೇಶಗಳ ಗಡಿಗಳ ಜಂಕ್ಷನ್ ಕೇಂದ್ರ ಎಲ್ಲಿ ಎಂಬ ಬಗೆಗೆ ಗೊಂದಲಗಳಿವೆ. ಭಾರತದ ಪ್ರಕಾರ ಅದುಬಾತಂಗ್ ಲಾದಲ್ಲಿದೆ. ಚೀನಾ ಪ್ರಕಾರ ಬಾತಂಗ್ ಲಾಕ್ಕಿಂತಲೂ  ದಕ್ಷಿಣಕ್ಕಿರುವ ಗಿಪ್ ಮೋಚಿ ಪರ್ವತ ಶ್ರೇಣಿ. ಭೂತಾನ್ ಕೂಡ ಭಾರತ ಹೇಳುವ ವಾಸ್ತವಿಕ ಗಡಿಯನ್ನೇ ಒಪ್ಪುತ್ತದೆ. ಅದರ ಪ್ರಕಾರ ಟಿಬೆಟಿನ ಸಾಕುಪ್ರಾಣಿಗಳಿಗೆ ಹಾಗೂ ಬುಡಕಟ್ಟು ಜನರಿಗೆ ಡೊಕ್ಲಮ್ ತಪ್ಪಲು ಮತ್ತು ದೊರ್ಸ ನಾಲಾ ಪ್ರದೇಶಗಳಿಗೆ ಪ್ರವೇಶವಿದ್ದರೂ ನಿಜವಾದ ತ್ರಿವಳಿ ದೇಶಗಳ ಜಂಕ್ಷನ್ ಕೇಂದ್ರ ಬಾತಂಗ್ ಲಾ ಪ್ರದೇಶವೇ ಆಗಿದೆ. ಇದರಲ್ಲಿ ಚೀನಾ ಮಾತ್ರ ಭಿನ್ನ ರಾಗ ಹಾಡುತ್ತಿದೆ. ಅದೇ ವಾದವನ್ನು ಮುಂದುವರೆಸಿ ಚೀನಾ ತನ್ನ ಗಡಿಯನ್ನು ದಾಟಿ ಮುಂದೆ ಬಂದಿದ್ದರೂ, ಭಾರತವೇ ತಮ್ಮ ಗಡಿ ದಾಟಿಬಂದು ತಮ್ಮ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಸಾರುತ್ತಿರುವುದು.

ಇದು ತಾನು ಮಾಡುವುದು ಮಾತ್ರವೇ ಸರಿ, ಉಳಿದವರವು ಏನು ಮಾಡಿದರೂ ತಪ್ಪು ಎಂಬ ಅಹಂಕಾರದ ವಿಸ್ತರಣೆ. ಸಾಮಾನ್ಯವಾಗಿ ಚೀನಾ ಎಲ್ಲಾ ಪ್ರದೇಶಗಳೊಂದಿಗೆ ಹಾಗೂ ಭಾರತದ ಸಂದರ್ಭದಲ್ಲಿ ವಿಶೇಷವಾಗಿ ಹೀಗೆ ವರ್ತಿಸುವುದು ಅದರ ಚಾಳಿಯಾಗಿದೆ. ಭೌಗೋಳಿಕ ಹಾಗೂ ಭೂಪಟದ ತಿರುಚುವಿಕೆಯ ಅಹಂಕಾರ ಮತ್ತು ಭೂಪಟ ಬದಲಾವಣೆಯ ದಾಳಿ. ಎರಡು ಸಂಗತಿಗಳು ಚೀನಾದ ಸಾಮ್ರಾಜ್ಯಶಾಲಿ ಮನೋಧರ್ಮ ಮತ್ತು ಅದರ ಸಾರ್ವಭೌಮತ್ವ ಹೇರಿಕೆಯ ನ್ಯಾಯಸಮ್ಮತಿಯನ್ನು ತಿಳಿಸುತ್ತವೆ

1890 ದಶಕದಿಂದಲೂ ಚೀನಾ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಒನ್ ರೋಡ್ಒನ್ ಬೆಲ್ಟ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಭಾಗದತ್ತ ವಿಶೇಷ ಗಮನ ಕೇಂದ್ರೀಕೃತವಾಗಿದೆ. ಚೀನಾದ ಬೀಜಿಂಗ್ಗೆ ಸಂಪರ್ಕ ಕಲ್ಪಿಸಲು ಟಿಬೆಟ್ ಭಾಗದಲ್ಲಿ ರಸ್ತೆ, ರೈಲ್ವೆ ಸಂಪರ್ಕಗಳ ಬೆಳವಣಿಗೆ, ಮೂಲಸೌಕರ್ಯಗಳ ಅಭಿವೃದ್ಧಿಯಾಗತೊಡಗಿದೆ. ಟಿಬೆಟ್ ಲ್ಹಾಸದಿಂದ ಯುಡೊಂಗ್ ಪ್ರಾಂತ್ಯಕ್ಕೆ ನಿರ್ಮಿಸಲಾಗಿರುವ 500 ಕಿಮೀ ದೂರದ ರಸ್ತೆಯನ್ನು ಕೇವಲ 8 ಘಂಟೆಯಲ್ಲಿ ಕ್ರಮಿಸಲು ಸಾಧ್ಯವಿದೆ. ಲ್ಹಾಸಶಿಗಟ್ಸೆ ರೈಲ್ವೆ ಸಂಪರ್ಕ ಅಭಿವೃದ್ಧಿಯಾದ ಮೇಲೆ ಅದರ ಮುಂದಿನ ಪ್ರದೇಶ ಡೊಕ್ಲಮ್ನತ್ತ ಚೀನಾ ಗುರಿ ನೆಟ್ಟಿದೆ

ಪ್ರಾದೇಶಿಕ ಹಾಗೂ ಜಾಗತಿಕ ಅಧಿಕಾರ ರಾಜಕಾರಣ, ಸಾಮ್ರಾಜ್ಯ ವಿಸ್ತರಣೆಯ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತಿರುವ ಚೀನಾ ತನ್ನದಲ್ಲದ ಡೊಕ್ಲಮ್ ಹಿಂದೆ ಬಿದ್ದಿರುವುದು. ಚೀನಾಕ್ಕೆ ಡೊಕ್ಲಮ್ ಪ್ರದೇಶವನ್ನು ಹೇಗಾದರೂ ಪಡೆಯಲೇಬೇಕೆಂಬ ತವಕ ತೀವ್ರವಾಗಿದ್ದು 1984ರಿಂದ. ಆದ್ದರಿಂದಲೇ 1984ರಿಂದ ಇಂದಿನವರೆಗೂ ಚೀನಾ, ಭೂತಾನ್ದೊಂದಿಗೆ 24 ಸುತ್ತುಗಳ ಸಮಾಲೋಚನಾ ಮಾತುಕತೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಮಾತುಕತೆಗಳ ಕೇಂದ್ರ ಡೊಕ್ಲಮ್ ಎಂಬುದೂ ವಿಶೇಷ. ಎಷ್ಟರ ಮಟ್ಟಿಗೆಂದರೆ 269 ಚದರ ಕಿಲೋಮೀಟರ್ ವಿಸ್ತೀರ್ಣದ ಅವಿಭಜಿತ ಡೋಕ್ಲಮ್ ಪ್ರಸ್ಥಭೂಮಿಯನ್ನು ಪಡೆಯುವುದಕ್ಕಾಗಿ ಭೂತಾನ್ ಉತ್ತರಕ್ಕಿರುವ ಚೀನಿ ಹಿಡಿತದಲ್ಲಿರುವ ಸುಮಾರು 495 ಚದರ ಕಿಲೋಮೀಟರ್ ವ್ಯಾಪ್ತಿಯ ಪಸಂಲಗ್ ಮತ್ತು ಜಾಕರ್ಲಂಗ್ ಕಣಿವೆ ಬಿಟ್ಟುಕೊಡುವ ಪ್ರಸ್ತಾಪವನ್ನಿಟ್ಟಿತ್ತು. ಚೀನಾ ಅದೇ ಅವಕಾಶವನ್ನು ಮುಂದಿನ ಎಲ್ಲಾ ಸುತ್ತುಗಳಲ್ಲಿಯೂ ಭೂತಾನ್ಗೆ ನೀಡಿದೆ. ಭಾರತದ ಮಧ್ಯಪ್ರವೇಶ ಹಾಗೂ ಭೂತಾನ್ಗೆ ತನ್ನ ನಿರ್ಣಯವನ್ನು ಬದಲಾಯಿಸುವಂತೆ ನೀಡಿದ ಮಾರ್ಗದರ್ಶನದ ಫಲವಾಗಿ ಚೀನಾದ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲಿಲ್ಲ. ವಿಚಾರದಲ್ಲಿ ಭಾರತದ ಸಮಯಪ್ರಜ್ಞೆ, ದೂರದೃಷ್ಟಿ ಹಾಗೂ ಭೂತಾನ್ ಮೈತ್ರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಪ್ರಾರಂಭದಿಂದಲೂ ಭಾರತ ಹಾಗೂ ಭೂತಾನ್ ಪರಮ ಮಿತ್ರ ರಾಷ್ಟ್ರಗಳು. ಭೂತಾನ್ ಅಭಿವೃದ್ಧಿಗಾಗಿ ಭಾರತದಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಾರ್ಡರ್ ರೋಡ್ ಆರ್ಗನೈಜೆಶನ್)” ‘ಆಪರೇಶನ್ ದಂತಕ್ಹೆಸರಿನಲ್ಲಿ 1,500ಕ್ಕೂ ಅಧಿಕ ಕಿಲೋಮೀಟರ್ಗಳ ರಸ್ತೆಯನ್ನು ನಿರ್ಮಿಸಿದೆ. ರಸ್ತೆಯ ಮಾರ್ಗಗಳು ಭಾರತದತ್ತ ಭೂತಾನವನ್ನು ಇನ್ನಷ್ಟು ಹತ್ತಿರಗೊಳಿಸಿದೆ. ಇಂಧನ, ವಿದ್ಯುತ್, ಶಿಕ್ಷಣ, ಆರೋಗ್ಯ ಇಂತಹ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತ ಭೂತಾನ್ಗೆ ಸಹಾಯಹಸ್ತ ಚಾಚಿಕೊಂಡು ಬಂದಿದೆ. ಹಾಗಾಗಿಯೇ ಎರಡೂ ದೇಶಗಳ ಸ್ನೇಹ ಗಾಢವಾಗಿರುವುದು.

ಸಿಕ್ಕಿಂನ ದಿವಾನರಾಗಿದ್ದ ನಾರಿ ರುಸ್ತುಂಜಿ ತಮ್ಮ ಪುಸ್ತಕಡ್ರ್ಯಾಗನ್ ಕಿಂಗ್ಡಮ್ ಇನ್ ಕ್ರೈಸಿಸ್ನಲ್ಲಿ ಹೇಳಿರುವಂತೆಚೀನಾ ಭೂತಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ದೇಶವನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಬೇಕೆಂಬ ಪ್ರಬಲ ಪ್ರಯತ್ನದಲ್ಲಿದೆ. ಆದರೆ ಚೀನಾದ ಅಂತಹ ಎಲ್ಲ ಪ್ರಯತ್ನಗಳನ್ನು ಭೂತಾನ್ ನಿರಾಕರಿಸಿದೆ. ಮೇಲಾಗಿ ಭೂತಾನದಿಂದ ಹೊರಡುವ ಎಲ್ಲಾ ರಸ್ತೆಗಳು ಭಾರತದತ್ತ ತೆರಳುತ್ತವೆ ಹೊರತು, ಟಿಬೆಟ್ನತ್ತ ಯಾವೊಂದು ರಸ್ತೆಯ ಕುರುಹೂ ಕಾಣಿಸುವುದಿಲ್ಲ“.

2007ರಲ್ಲಿ ಪುರ್ನರಚಿತಗೊಂಡ ಭಾರತಭೂತಾನ್ ಸ್ನೇಹ ಒಪ್ಪಂದ ಎರಡೂ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಹೊಸ ಒಪ್ಪಂದವು ಭೂತಾನ್ ವಿದೇಶಾಂಗ ನೀತಿಗಳನ್ನು ನಿರ್ಧರಿಸುವ ಅಧಿಕಾರವನ್ನು ಭಾರತಕ್ಕೆ ನೀಡಿತು. ಆದರೆ 2008 ತರುವಾಯ ಭೂತಾನ್ ಮೊತ್ತ ಮೊದಲ ಬಾರಿ ಜನರಿಂದ ಆಯ್ಕೆಯಾದ ಪ್ರಧಾನಿಯನ್ನು ಪಡೆದಿತ್ತು. ಜಿಗ್ಮೆ ತಿನ್ಲೆ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ಭೂತಾನ್ ದೇಶವನ್ನು ಭಾರತದ ಛಾಯೆಯಡಿಯಿಂದ ಸ್ವತಂತ್ರವಾಗಬೇಕೆಂದು ಸ್ವತಂತ್ರ ವಿದೇಶಿ ನೀತಿಗಳನ್ನು ನಿರೂಪಿಸಲು ಆರಂಭಿಸಿದ್ದರು. ಕಾಲದಲ್ಲಿ ಭಾರತಭೂತಾನ್ ದೂರವಾಗುತ್ತಿರುವಂತೆ ತೋರಿತ್ತು. ಭೂತಾನ್ ತನಗೆ ಬೇಕಾದ್ದನ್ನೇ ಆರಿಸಕೊಳ್ಳಲಿ ಎಂದು ಅದರಷ್ಟಕ್ಕೇ ಬಿಟ್ಟಿದ್ದ ಭಾರತವೂ ಸಮಯದಲ್ಲಿ ಈಶಾನ್ಯ ಏಷ್ಯಾ ಹಾಗೂ ಪಶ್ಚಿಮ ದೇಶಗಳತ್ತ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿತ್ತು.

ಮುಂದಿನ ಐದು ವರ್ಷಗಳ ಜಿಗ್ಮೆ ತಿನ್ಲೆ ಅಧಿಕಾರವಧಿಯಲ್ಲಿ ಭೂತಾನ್ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಲು ಹೊರಟಿತ್ತು. ಅದೇ ರೀತಿ ಡೊಕ್ಲಮ್ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಡುವ ವಿಫಲ ಯೋಚನೆಯನ್ನು ಮಾಡಲಾಗಿತ್ತು. ಅದೇ ಸಮಯಕ್ಕಾಗಿ ಕಾಯುತ್ತಿದ್ದ ಚೀನಾ, ಡೊಕ್ಲಮ್ ಪ್ರದೇಶದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿತು. ಅನಧಿಕೃತ ರಸ್ತೆ ನಿರ್ಮಾಣದ ಕುರಿತು ಅಂದಿನ ರಾಯಲ್ ಭೂತಾನ್ ಸೇನೆಯಾಗಲಿ, ಜನರಿಂದ ಆಯ್ಕೆಯಾಗಿದ್ದ ಭೂತಾನ್ ಸರಕಾರವಾಗಲಿ ಯಾವುದೇ ಚಕಾರ ಎತ್ತಲಿಲ್ಲ. ಪರಿಣಾಮ ಡೊಕ್ಲಮ್ ಇಂದು ಭಾರತಚೀನಾ ನಡುವೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಉಲ್ಬಣಿಸಿದೆ ಹಾಗೂ ಈಗಿನ ಉಭಯ ದೇಶಗಳ ನಡುವಿನ ಪರಸ್ಪರ ಕಚ್ಚಾಟಕ್ಕೆ ಕೇಂದ್ರಬಿಂದು.

2013 ಹೊತ್ತಿಗೆ ಭಾರತಕ್ಕೆ ಭೂತಾನ್ನಲ್ಲಿ ಪರಿಸ್ಥಿತಿ ಕೈತಪ್ಪುತ್ತಿರುವುದರ ಮನವರಿಕೆಯಾಯಿತು. ಆದ್ದರಿಂದಲೇ ಭೂತಾನ್ ಸಾರ್ವಜನಿಕ ಚುನಾವಣೆಯ ಹೊತ್ತಿಗೆ ಸರಿಯಾಗಿ, ಮನಮೋಹನ್ ಸಿಂಗ್ ನೇತೃತ್ವದ ಭಾರತ ಸರಕಾರ ಭೂತನ್ಗೆ ನೀಡುತ್ತಿದ್ದ ಇಂಧನ ಸಹಾಯಧನ(ಸಬ್ಸಿಡಿ)ವನ್ನು ತಕ್ಷಣ ನಿಲ್ಲಿಸಿತು. ಪರಿಣಾಮ ಅಂದುಕೊಂಡಂತೆ ಜಗ್ಮೆ ತಿನ್ಲೆಗೆ ಚುನಾವಣೆಯಲ್ಲಿ ಸೋಲುಂಟಾಯಿತು. ಭೂತಾನ್ನಲ್ಲಿ ನೂತನವಾಗಿ ಆಯ್ಕೆಯಾದ ಶೆರಿಂಗ್ ತೊಬ್ಗೆ ಸರಕಾರದೊಂದಿಗೆ ಸಂಬಂಧ ಗಟ್ಟಿಗೊಳಿಸುವ ಯಾವ ಅವಕಾಶವನ್ನೂ ನವದೆಹಲಿ ಬಿಡಲಿಲ್ಲ. ಭೂತಾನ್ ಕೂಡ ಭಾರತದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿತು. ಭೂತಾನ್ ಮೇಲಿನ ಭಾರತದ ಪ್ರಭಾವಳಿಯನ್ನು ಅರ್ಥಮಾಡಿಕೊಂಡ ಚೀನಾ, ಭೂತಾನ್ನೊಂದಿಗಿನ ಸಮಾಲೋಚನೆಯಿಂದ ಡೊಕ್ಲಮ್ ವಿಷಯವನ್ನು ಹಿನ್ನೆಲೆಗೆ ಸರಿಸಿತು. 2014 ಸಾರ್ವಜನಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರ ಭಾರತದಲ್ಲಿ ರಚನೆಯಾಯಿತು. ಅದಾಲೇ ಭಾರತಭೂತಾನ್ ಸಾಂಪ್ರದಾಯಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಕಾಲ ಪಕ್ವವಾಗಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ಕಾಣ್ಕೆಯಿಂದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕೆ ಮೊದಲು ಭೇಟಿ ಕೊಟ್ಟ ದೇಶ ಭೂತಾನ್. ಅನೇಕ ಹೊಸ ಒಪ್ಪಂದಗಳ ಜೊತೆಗೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ವಿವಿಧ ಮಜಲುಗಳಲ್ಲಿ ವಿಸ್ತರಿಸಲಾಯಿತು. ಅದಾಗಿ ಒಂದು ವರ್ಷದೊಳಗೆ ಚೀನಾ ದೇಶ ಮಾನಸ ಸರೋವರ ಯಾತ್ರೆಗೆ ಪೂರಕವಾದ ಸಿಕ್ಕಿಂ ಮೂಲಕ ಹಾದುಹೋಗುವನಾಥುಲಾಕಣಿವೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿತು.(ಡೊಕ್ಲಮ್ ನೆಪದಲ್ಲಿ ಅದನ್ನು ಈಗ ಚೀನಾ ಮತ್ತೆ ಮುಚ್ಚಿದೆ.)

ಅದೇ ಕಾರಣದಿಂದ ಇಂದಿನ ಬಿಗಿ ಸಮಯದಲ್ಲೂ ಚೀನಾದ ಯಾವ ಒತ್ತಡಕ್ಕೂ ಮಣಿಯದೆ ಭೂತಾನ್ ತನ್ನ ಪರಂಪರಾಗತ ನಂಬಿಕೆಯಂತೆ ಭಾರತದ ಜೊತೆಗೆ ಭದ್ರವಾಗಿ ನಿಂತಿರುವುದು. ಅಸಲಿಗೆ ಡೊಕ್ಲಾಮ್ ಭೂತಾನ್ ಆಂತರಿಕ ಸಮಸ್ಯೆ. ಆದರೂ 2007 ಉಭಯ ರಾಷ್ಟ್ರಗಳ ನಡುವಿನ ಸ್ನೇಹ ವರ್ಧನೆಯ ಒಪ್ಪಂದದ ಫಲವಾಗಿ ಮತ್ತು ತನ್ನ ಹಿತಾಸಕ್ತಿಯನ್ನೂ ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಭೂತಾನ್ ಸಮಸ್ಯೆಗೆ ಹೆಗಲು ಕೊಟ್ಟು ನಿಂತಿದೆ.

ಆದರೆ ಭಾರತದ ನಿರೀಕ್ಷಿತ ನಡೆಗೆ ಚೀನಾ ಮತ್ತೊಂದು ತಂತ್ರ ರೂಪಿಸಿದಂತಿದೆ. ತನ್ನದಲ್ಲದ ನೆಲದಲ್ಲಿ ಭಾರತೀಯ ಸೇನೆ ಬೀಡುಬಿಟ್ಟಿರುವುದನ್ನು ಚೀನಾ ಮಾಧ್ಯಮ ಬೇರೆಯದೇ ರೀತಿಯಲ್ಲಿ ಭೂತಾನ್ ಜನತೆಗೆ ತಲುಪಿಸುತ್ತಿವೆ. ಭೂತಾನ್ ಜನತೆಯಲ್ಲಿ ಭಾರತವೆಂದರೆ ತನ್ನ ನೆರೆಯ ರಾಷ್ಟ್ರಗಳ ವಿಚಾರದಲ್ಲಿ ಅನಗತ್ಯವಾಗಿ ಮೂಗುತೂರಿಸುವ ದೊಡ್ಡಣ್ಣ ಹಾಗೂ ಅದರ ಸ್ವಾರ್ಥಕ್ಕಾಗಿ ಭೂತಾನ್ ನೆಲವನ್ನು ಬಳಸಿಕೊಳ್ಳುತ್ತಿದೆ ಎಂಬಭಾರತ ವಿರೋಧಿಭಾವನೆಯನ್ನು ಭೂತಾನ್ ಜನತೆಯಲ್ಲಿ ಉದ್ದೇಶಪೂರ್ವಕವಾಗಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇದು ಇತ್ತೀಚೆಗೆ ನೇಪಾಳದ ಜನತೆಯಲ್ಲಿ ಭಾರತ ವಿರೋಧಿ ಭಾವನೆಯನ್ನು ಮೂಡಿಸುವ ಪ್ರಯತ್ನದ ಮುಂದುವರೆದ ಭಾಗ. ಮೂಲಕ ಭಾರತಭೂತಾನ್ ಸಂಬಂಧವನ್ನು ಸಡಿಲಗೊಳಿಸುವುದು. ನಂತರ ಭಾರತದಿಂದ ದೂರಾದ ದುರ್ಬಲ ಭೂತಾನ್ ದೇಶವನ್ನು ತನ್ನ ಹಿಡಿತಕ್ಕೆ ತಂದುಕೊಂಡು ಡೊಕ್ಲಾಮ್ ಪ್ರದೇಶವನ್ನು ಸುಪರ್ದಿಗೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆ ಚೀನಾದ್ದು. ಒಂದು ವೇಳೆ ನೇರ ಯುದ್ಧವಾಗದಿದ್ದರೂ (ಕು)ತಂತ್ರದಿಂದ ತನ್ನ ಗುರಿಯನ್ನು ಸಾಧಿಸುವ ಕುಟಿಲ ನೀತಿ ಇದರಲ್ಲಿ ಗೋಚರವಾಗುತ್ತಿದೆ. ಅದಕ್ಕೆ 55ದಿನಗಳ ಕಾಲ ಸಮಸ್ಯೆಯನ್ನು ವಿಸ್ತರಿಸಿದ್ದು. ಹಾಗೂ ಇನ್ನಷ್ಟು ದಿನಗಳ ಕಾಲ ಇದನ್ನು ಮುಂದುವರೆಸುವಂತೆ ತೋರುತ್ತಿದೆ.

ಹೊತ್ತಿನಲ್ಲಿ ಭಾರತದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಭಾರತವನ್ನು, ಇಲ್ಲಿನ ನಾಯಕತ್ವವನ್ನು ವಿಜೃಂಭಿಸಿಕೊಳ್ಳುವ ಭರಾಟೆಯಲ್ಲಿ ಭೂತಾನದ ಅಸ್ಮಿತೆ, ಸ್ವಾಭಿಮಾನಕ್ಕೆ ಕುಂದುಂಟಾಗದಂತೆ ಎಚ್ಚರವಹಿಸಬೇಕು. ಕನಿಷ್ಟ ಸರಕಾರ, ಜನಪ್ರತಿನಿಧಿಗಳು ಯಾವುದೇ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು. ಇತ್ತೀಚೆಗೆ ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ಪ್ರತಿನಿಧಿಯೊಬ್ಬರು ಮಾತಿನ ಭರಾಟೆಯಲ್ಲಿಚೆಂಡು ಮೊದಲು ಬಂದದ್ದೋ ಅಥವಾ ಚೆಂಡು ಬರುವ ಮುನ್ನವೇ ದಾಂಡಿಗ ಹೊಡೆಯುವುದಕ್ಕೆ ತಯಾರಾಗಿ ನಿಂತಿದ್ದನೋಎಂಬ ಮಾತುಗಳನ್ನಾಡಿದ್ದರು. ನೇರವಾಗಿ ಹೇಳಿಕೆಯಲ್ಲಿ ಯಾವುದೇ ಸಮಸ್ಯೆ ಗೋಚರಿಸುವುದಿಲ್ಲ. ಆದರೆ ಇದರಾಳದಲ್ಲಿ ಭೂತಾನ್ ಸಾರ್ವಭೌಮತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮನಸ್ಥಿತಿಯಿದೆ. ಇಂತಹ ಹೇಳಿಕೆಗಳು ಗಡಿಯ ಕಡೆಗಿರುವ ಭೂತಾನ್ ಜನರ ಮೇಲೆ ಭಾರತದ ಕುರಿತು ಬೇರೆಯದೆ ರೀತಿಯ ಪರಿಣಾಮವನ್ನು ಬೀರಬಹುದೆಂಬ ಸೂಕ್ಷ್ಮ ನಮಗಿರಬೇಕು.

Shreyanka S Ranade

shreyanka.sr1857@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!