ಕವಿತೆ

ಸ್ತ್ರೀ ವಾದಿಯ ಕವನ

ನಾನು ಗಂಡಸರ ದೌರ್ಜನ್ಯದ
ವಿರುದ್ಧ ಧ್ವನಿ ಎತ್ತಿದ
ಸ್ತ್ರೀ ವಾದಿ ಲೇಖಕಿ..
ನನ್ನಪ್ಪ ನನ್ನ ಸರ್ವಸ್ವ
ಒಳಗೊಳಗೆ ನೋವು ನುಂಗಿ
ಸಂಸಾರದ ಬಂಡಿ ಎಳೆದ ಅಪ್ಪ
ಈ ಲೇಖನಿ ಹಿಡಿದಾಗ
ನೆನಪೇ ಆಗುವುದಿಲ್ಲ.‌

ಅವನ ತಂಗಿಯ ಮದುವೆ
ನಿದ್ದೆಗೆಟ್ಟು ದುಡಿದು
ಕೂಡಿಟ್ಟ ಹಣವ
ವರದಕ್ಷಿಣೆ ಕೊಟ್ಟು
ತಂಗಿ ಸುಖವಾಗಿರಲೆಂದ
ಆ ಅವಳಣ್ಣನೂ
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ…

ಇವರಂತಹ ಯಜಮಾನ
ಯಾರಿಗೂ ಸಿಕ್ಕಿಲ್ಲ
ಒಂದೂ ಹೂ ದೇವರಿಗೆ
ಹೆಚ್ಚು ಅರ್ಪಿಸಿರಬಹುದು
ಪುಣ್ಯ ಮಾಡಿದ್ದೇನೆ
ಎಂದ ಆ ಹೆಂಗಸಿನ ಮಾತು
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ..

“ನನ್ನಮ್ಮ ನನ್ನ
ಬೆಳಕು” ಎನ್ನುವ
ಈವರೆಗೂ ವೃದ್ದಾಶ್ರಮದ
ಬಾಗಿಲು ತಟ್ಟಿಸದ
ಆ ಕೈಕಾಲು ಬಿದ್ದೋದ
ಮುದುಕಿಯ ಮಗ
ಲೇಖನಿ ಹಿಡಿದಾಗ
ನೆನಪಾಗಲೇ ಇಲ್ಲ..

ಒಂದು ಕ್ಷಣ
ನನಗೆ ಇವು ನೆನಪಾದಾಗ
ಲೇಖನಿ ಮುಸಿ ಮುಸಿ
ನಕ್ಕಂತಾಯಿತು..
ನಾನೂ ಸುಮ್ಮನಾಗಿಬಿಟ್ಟೆ‌‌..
ವ್ಯವಸ್ಥೆಯಲಿ ಎಲ್ಲವೂ ಇದೆ..
ಅಲ್ಲಲ್ಲಿ ಚೂರು ಕೆಟ್ಟಿರಬಹುದು.‌.
ಪದಗಳು ಹೊಂದಾಣಿಕೆಯಾಗಲೇ ಇಲ್ಲ..

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!