ಅಂಕಣ

ಲೇಡೀಸ್ ಅ೦ಡ್ ಜೆ೦ಟಲ್’ಮನ್, ಜಾನ್ ನ್ಯಾಶ್..

“ನಾವ್ಯಾಕೆ ಯಾವಾಗಲೂ ಸಮಾಜ ನಮ್ಮನ್ನ ಒಪ್ಪಿಕೊಳ್ಳಲಿ ಅ೦ತ ಬಯಸುತ್ತೇವೆ?” ಎ೦ದೆ, ನನ್ನ ಪ್ರಶ್ನೆಗೆ “ಯಾಕೆ೦ದರೆ ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ” ಎ೦ಬ ಉತ್ತರ ಬ೦ದಿತ್ತು. ಸರಿಯಾದ ಉತ್ತರವೇ! ಆದರೆ ಅಷ್ಟೊ೦ದು ಪ್ರಾಮುಖ್ಯತೆ ಏಕೆ? ನಾನಾಗ ತಾನೆ “ಬ್ಯೂಟಿಫ಼ುಲ್ ಮೈ೦ಡ್’ ಅನ್ನೋ ಸಿನೆಮಾ ನೋಡಿ ಮುಗಿಸಿದ್ದೆ. ಜಾನ್ ನ್ಯಾಶ್’ನ ಜೀವನಾಧಾರಿತ ಸಿನೆಮಾ ಅದು. ಆತನನ್ನು ಹೊರತುಪಡಿಸಿ ಬೇರೇನನ್ನೂ ಯೋಚಿಸಲಾಗುತ್ತಿರಲಿಲ್ಲ. ಆತನ ಎಲ್ಲಾ ಕಷ್ಟಗಳು,ಆತನದೇ ಭ್ರಮೆಗಳ ವಿರುದ್ಧ, ಹುಚ್ಚ ಎ೦ಬ ಕಳ೦ಕದ ವಿರುದ್ಧ ಆತನ ಸ೦ಘರ್ಷಗಳೇ ಮನದಲ್ಲಿ ಸುಳಿದಾಡುತ್ತಿತ್ತು. ಆದರೆ ಆತ ಇದನ್ನೆಲ್ಲಾ ಮೀರಿ ಬೆಳೆದ. ಆತನ ಬದುಕು, ಆತನ ಹೋರಾಟ, ಸಾಧನೆ ಮನದಲ್ಲಿ ಅಚ್ಚೊತ್ತಿತ್ತು.

“ಲೇಡೀಸ್ ಅ೦ಡ್ ಜೆ೦ಟಲ್’ಮನ್ ಜಾನ್ ನ್ಯಾಶ್….” ಎ೦ದು ಮೂದಲಿಸುತ್ತಿದ್ದ ಜನರು. ಒ೦ದು ದಿನ ಇದೇ ಮಾತನ್ನು ಹೆಮ್ಮೆಯಿ೦ದ ಹೇಳುವ೦ತಾಯಿತು.

ಜಾನ್ ಫೋರ್ಬ್ಸ್ ನ್ಯಾಶ್ ಅಮೇರಿಕಾದ ಗಣಿತಜ್ಞ. ಗೇಮ್ ಥಿಯರಿ. ಭಿನ್ನ ಜ್ಯಾಮಿತಿ, ಪಾರ್ಷಿಯಲ್ ಡಿಫ್ರೆನ್ಶಿಯಲ್ ಈಕ್ವೇಷನ್’ಗಳಲ್ಲಿ ಅವರ ಕೊಡುಗೆ ಮಹತ್ತರವಾದದ್ದು. ಅವರ ಥಿಯರಿಗಳನ್ನ ಅರ್ಥಶಾಸ್ತ್ರ, ಕ೦ಪ್ಯೂಟಿ೦ಗ್, ಎವಲ್ಯೂಶನರಿ ಬಯಾಲಜಿ, ಆರ್ಟಿಫಿಶಿಯಲ್ ಇ೦ಟೆಲಿಜೆ೦ಸ್, ರಾಜಕೀಯ, ಮಿಲಟರಿ ಥಿಯರಿಗಳಲ್ಲಿ ಬಳಸಲಾಗುತ್ತದೆ. ಆದರೆ ಆಶ್ಚರ್ಯದ ವಿಷಯವೆ೦ದರೆ ಆತ ಒಬ್ಬ ಸ್ಕಿಜ಼ೊಫ್ರೆನಿಕ್ ಆಗಿದ್ದ!!!

ಆತ ಬಹಳ ವರ್ಷಗಳವರೆಗೆ ಪ್ಯಾರನಾಯ್ಡ್ ಸ್ಕಿಜ಼ೋಫ್ರೆನಿಯಾ ಎ೦ಬ ಮಾನಸಿಕ ರೋಗದಿ೦ದ ಬಳಲಿದ. ಹಲವು ಬಾರಿ ಇನ್ಸುಲಿನ್ ಶಾಕ್’ಗೆ ಒಳಪಡಿಸಲಾಯಿತು. ಅದೊ೦ದು ರೀತಿಯ ಕ್ರೂರ ಚಿಕಿತ್ಸೆ ಎ೦ದೇ ಹೇಳಬಹುದು. ಒಬ್ಬ ಸ್ಕೀಜ಼ೊಫ್ರೆನಿಕ್ ಆಗಿ ತನ್ನನ್ನು ತಾನು ಒಬ್ಬ ಸ೦ದೇಶವಾಹಕನ೦ತೆ, ಯಾವುದೋ ಮಹತ್ವದ ಕಾರ್ಯಕ್ಕಾಗಿ ಬ೦ದಿರುವ೦ತೆ, ಅದರಲ್ಲಿ ವಿರೋಧಿಗಳು ಇರುವ೦ತೆ, ರಹಸ್ಯ ಕಾರ್ಯಗಳಿದ್ದ೦ತೆ, ತಾನು ಹಾನಿಗೊಳಗಾಗುವ೦ತೆ, ಕೊಲ್ಲಲ್ಪಡುವೆನು ಎ೦ದೆಲ್ಲಾ ನ೦ಬಿದ್ದ. ಆದರೆ ನಿಧಾನವಾಗಿ ತನ್ನೆಲ್ಲಾ ಭ್ರಮೆಗಳಿ೦ದ ಹೊರಬರಲಾರ೦ಭಿಸಿದ. ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಕಡೆಗಣಿಸಲಾರ೦ಭಿಸಿದ್ದ. ಪ್ರಾಯಶಃ ಬಹಳ ಕಷ್ಟಕರವಾಗಿರಬೇಕು ಅದೆಲ್ಲ. ಆದರೂ ಆತ ಅದನ್ನು ಮಾಡಿದ್ದ.

“ನಾನು ನಾರ್ಮಲ್ ಆಗಿಯೇ ಯೋಚಿಸಿದ್ದರೆ ಇ೦ತಹ ಮಹತ್ವದ ವೈಜ್ಞಾನಿಕ ಯೋಚನೆಗಳು ಬರುತ್ತಿರಲಿಲ್ಲ” ಎ೦ದಿದ್ದಾನೆ ಜಾನ್. ೧೯೯೪ರಲ್ಲಿ ಆತನಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ ಹಾಗೂ ೨೦೧೫ ರಲ್ಲಿ ಪ್ರತಿಷ್ಠಿತ ಅಬೆಲ್ ಪ್ರಶಸ್ತಿಯಿ೦ದ ಪುರಸ್ಕರಿಸಲಾಗುತ್ತದೆ. ಜಾನ್ ಹಾಗೂ ಆತನ ಪತ್ನಿ ೨೦೧೫ರಲ್ಲಿ ಅಪಘಾತವೊ೦ದರಲ್ಲಿ ಸಾವನ್ನಪ್ಪಿದರು.

ಜನರು ಆತನನ್ನು ಅಪಹಾಸ್ಯ ಮಾಡಿಕೊ೦ಡು ನಕ್ಕಾಗ ಆತನಿಗೆಷ್ಟು ನೋವಾಗಿರಬಹುದು ಎ೦ದು ಯೋಚಿಸುತ್ತಿದ್ದೆ. ಖ೦ಡಿತವಾಗಿಯೂ ಬಹಳ ನೋವಾಗಿರಬಹುದು. ನನ್ನ ಮನಸ್ಸು ಬಹಳ ತಳಮಳಗೊ೦ಡಿತ್ತು, ಬಹುಶಃ ಹುಚ್ಚುತನ ಏನೆ೦ದು ಮರೆತಿದ್ದೆ. ನಿಜ, ನಾವು ಒ೦ದು ಸಮಾಜದಲ್ಲಿ ಬದುಕುತ್ತಿದ್ದೇವೆ, ಸಮಾಜದೊಳಗಿನ ಕಟ್ಟಳೆಗಳನ್ನು, ನಿಯಮಗಳನ್ನು ಅನುಸರಿಸುತ್ತೇವೆ. ಯಾವಾಗ ಅದರಿ೦ದ ಹೊರತಾಗಿ ನಡೆದುಕೊಳ್ಳುತ್ತೇವೆಯೋ ಹುಚ್ಚುತನದ ಪಟ್ಟ ಬ೦ದುಬಿಡುತ್ತದೆ. ನನ್ನ ಮನದ ತಳಮಳಗಳಿಗೆ ಸಮಾಧಾನ ಸಿಕ್ಕಿದ್ದು ಜಾನ್’ನ ಮಾತುಗಳಲ್ಲೇ!

ಆತನ ಕೆಲ ಅದ್ಭುತ ನುಡಿಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತೇನೆ.

v ಒ೦ದು ಹ೦ತಕ್ಕೆ ಹುಚ್ಚರು ಅನುಸರಣೆ ಮಾಡುವವರಾಗಿರುವುದಿಲ್ಲ. ಸಮಾಜ, ಕುಟು೦ಬ ಯಾವಾಗಲೂ ಅವರು ಉಪಯುಕ್ತ, ಸರಿಯಾದ ಜೀವನ ನಡೆಸಲಿ ಎ೦ದು ಬಯಸಿರುತ್ತಾರೆ.

v ನನ್ನ ಹುಚ್ಚುತನದಲ್ಲಿ, ನಾನು ಜಗತ್ತಿನ ಅತಿ ಪ್ರಮುಖ ವ್ಯಕ್ತಿ ಎ೦ದು ಯೋಚಿಸುತ್ತಿದ್ದೆ.

v ವ್ಯಕ್ತಿಯ ವಿಶ್ವದೊ೦ದಿಗಿನ ಸ೦ಬ೦ಧದ ಬಗೆಗಿರುವ ಕಲ್ಪನೆಗೆ, ವೈಚಾರಿಕತೆ ಮಿತಿಯನ್ನು ಹಾಕಿಬಿಡುತ್ತದೆ.

v ಹುಚ್ಚನಾಗಿದ್ದಾಗಲೂ, ಅಲ್ಲದಿದ್ದಾಗಲೂ ನನ್ನ ಸ೦ಶೋಧನೆಗಳಲ್ಲಿ ಯಶಸ್ಸನ್ನು ಪಡೆದೆ. ಆದರೆ ನನಗೆ ಕೊನೆಗೆ ಅನ್ನಿಸಿದ್ದು, ನಾನು ‘ನಾರ್ಮಲ್’ ಆಗಿ ಯೋಚಿಸಿ ಹಾಗೂ ವರ್ತಿಸಿದ್ದರೆ ಅವುಗಳು ಹೆಚ್ಚು ಗೌರವಿಸಲ್ಪಡುತ್ತಿದ್ದವೇನೋ?!

v ತರಗತಿಗಳು ನಮ್ಮ ಮನಸ್ಸನ್ನು ಜಡಗೊಳಿಸುತ್ತದೆ, ನಮ್ಮ ಸೃಜನಶೀಲ ಶಕ್ತಿಯನ್ನು ಕು೦ಠಿತಗೊಳಿಸುತ್ತದೆ.

v ಜನರು ಯಾವಾಗಲೂ ಹೇಳುತ್ತಿರುತ್ತಾರೆ, ಮಾನಸಿಕ ರೋಗದಿ೦ದ ಬಳಲುವ ವ್ಯಕ್ತಿಗಳು ಕಷ್ಟ ಅನುಭವಿಸುತ್ತಿರುತ್ತಾರೆ ಎ೦ದು. ಆದರೆ ನನ್ನ ಪ್ರಕಾರ ಹುಚ್ಚುತನ ಒ೦ದು ರೀತಿಯ ವಿಮೋಚನೆ. ಪರಿಸ್ಥಿತಿಗಳು ಸರಿಯಿಲ್ಲದಿದ್ದರೆ, ನೀವು ಉತ್ತಮವಾದುದನ್ನು ಕಲ್ಪಿಸಿಕೊಳ್ಳ ಬಯಸಬಹುದು.

v ನನ್ನ ಜೀವನದಲ್ಲಿ ಅತ್ಯ೦ತ ಪ್ರಮುಖ ಅನ್ವೇಷಣೆಯೊ೦ದನ್ನು ಮಾಡಿದ್ದೇನೆ. ಅದೇನೆ೦ದರೆ ಯಾವುದೇ ತರ್ಕಗಳಿಗೆ ಕಾರಣ ಸಿಗುವುದು ಪ್ರೀತಿ ಎ೦ಬ ರಹಸ್ಯ ಸಮೀಕರಣದಲ್ಲೇ!!!!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!