ಕವಿತೆ

“ಪ್ರೀತಿಗಾಗಿ…” ಮತ್ತು “ಹೆಣ್ಣೊಬ್ಬಳು”: ಎರಡು ಕವನಗಳು

  “ಪ್ರೀತಿಗಾಗಿ…”

ಪ್ರೀತಿಗಾಗಿ ಹಂಬಲಿಸಿದಳವಳು..
ತುಂಬಿದೆದೆಯ ಪ್ರೀತಿಯನ್ನು
ಅವನೆದೆಯಲಿ ತುಂಬಿದಳು..
ಅವನಿಗೋ ಹೃದಯವಿರಲಿಲ್ಲ..
ನಿರಾಕರಿಸಿಬಿಟ್ಟ..!

ಪ್ರೀತಿಯ ದಿಕ್ಕು ಬದಲಾಯಿತು..
ಅವಳು ಸಾವನ್ನು ಪ್ರೀತಿಸತೊಡಗಿದಳು.!

ಸಾವು ಕ್ರೂರಿಯಾದರೇನಂತೆ.?
ಸಾವಿಗೊಂದು ಹೃದಯವಿದೆ,
ಅದಕ್ಕೂ ಕರುಣೆಯಿದೆ..!
ಪ್ರೀತಿಗಾಗಿ ಹಂಬಲಿಸಿದವಳನ್ನು
ಸಾವು ಪ್ರೀತಿಸಿ, ಆಲಿಂಗಿಸಿ ಮುದ್ದಾಡಿತು..
ಆಸರೆಕೊಟ್ಟು ಕೈಹಿಡಿಯಿತು..!
ಬದುಕನ್ನು ಪ್ರೀತಿಸಿ ಸೋತವಳು
ಸಾವನ್ನೇ ಪ್ರೇಮಿಸಿ ವರಿಸಿದಳು!

ಸಮಾಜದ ಕಣ್ಣಿಗದು ಪ್ರೇಮವೈಫಲ್ಯತೆ,
ಅದೊಂದು ‘ಆತ್ಮಹತ್ಯೆ..’
ಅವಳ ಪಾಲಿಗೆ ಮಾತ್ರ
ಪ್ರೇಮ ಸಾಫಲ್ಯತೆಯ ಉತ್ಕಟ ಭಾವ.!
ಸಾವಿನೊಳಗೊಂದಾಗುವ ಸರಸಸಂಭ್ರಮ,
‘ಪ್ರೇಮಸಮ್ಮಿಲನ.!’

“ಹೆಣ್ಣೊಬ್ಬಳು”

ಹೆಣ್ಣೊಬ್ಬಳು
ಕವಿತೆಯಾಗುವಳು..
ಅವಳ ಚರ್ಮದ ಕಾಂತಿಯು ಕಳೆದು
ಬಣ್ಣ ಮಾಸುವ ತನಕ..

ಹೆಣ್ಣಿನ ಸೌಂದರ್ಯ
ಕಲೆಯಾಗಿ ಕುಂಚದಲ್ಲರಳುವುದು..
ಅವಳ ದೇಹವು ಮಸಣವ ಸೇರಿ
ಮಣ್ಣಾಗುವ ತನಕ..

ಬೂದಿಯಾಗುವ
ದೇಹದ ಮೇಲೆ ಮೋಹವೇ..?
ಕೃಶವಾಗುವ
ಚರ್ಮದ ಮೇಲೆ ಪ್ರೇಮವೇ..?

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!