ಪ್ರಚಲಿತ

ರಮ್ಮು ರಾಹುಲ್ಲು ಪಾರೀನ್ದಾಗೆ ಏನ್ಮಾಡ್ತಿದಾರೆ ಸಿವಾ!!!

ಬುಡ್ ಬುಡಿಕೆ

ರಮ್ಮು ರಾಹುಲ್ಲು ಪಾರೀನ್ದಾಗೆ ಏನ್ಮಾಡ್ತಿದಾರೆ ಸಿವಾ!!!

“ಎಣ್ಮಕ್ಳ ವಿಷ್ಯಕ್ಕ್ ಬಂದ್ರೆ ಗೊತ್ತಲ್ಲ ನಾನೆಂತವನೂ ಅಂತ. ಬೇಕಿತ್ತ ಇದೆಲ್ಲ. ಅಯ್ಯೋ!!!.. ನಮ್ಮಪ್ಪ ಕೋಟ್ಯಾಧಿಪತಿ” ಹೀಂಗೆ ತನ್ನ ಹಟ್ಟಿ ಮುಂದೆ ಚಳಿ ಕಾಯ್ಸ್ಕೊಂಡು, ಮೈಕ್ ಹಿಡ್ಕೊಂಡು ಕೈ, ಕಾಲು,‘ಅದು’,‘ಇದು’ ಶೇಕ್ ಮಾಡ್ಕೊಂಡು ಕಣ್ಣ್ ಕೆಂಪಗೆ ಮಾಡ್ಕೊಂಡು ಕಿರುಚಾಡ್ತಿತ್ತು ಕಲ್ಲೇಶಿ. ಅವಾಗ ತಾನೆ ಕೆರೆ ಕಡೆಯಿಂದ ತನ್ನ ನಿತ್ಯ ಕರ್ಮಗಳನ್ನ ಮುಗ್ಸಿ ವಾಪಾಸಾಗ್ತಿದ್ದ ಮಲ್ಲೇಶಿ ಇದನ್ನ್ ಕೇಳಿಸ್ಕೊಂಡು ಗಾಬ್ರಿ ಬಿದ್ದೋಯ್ತು.

“ಅಗಳಗಳೋ!!! ಇದ್ಯೆನಾಯ್ತ್ಲಾ  ನಮ್ಮ್ ಕಲ್ಲೇಶಿಗೆ. ನಿನ್ನೆ ತನ್ಕ ಚೆನ್ನಾಗಿನೇ ಇತ್ತು. ನೀ ಏನಾರ ವಾಮಾಚಾರ ಮಾಡ್ಯೆನ್‌ಲಾ ಮಿಸ್ಟರ್. ಕೋಳಿ!!!” ಅಂತ ಪಕ್ಕದಲ್ಲಿದ್ದ ಮುರುಗನ್ ಕಡೆ ತಿರುಗ್ತು ಮಲ್ಲೇಶಿ.

“ನಂಡ್ರೀ ವಣಕ್ಕಂ ಮಲ್ಲೇಶಣ್ಣಾ!!! ನೋಡ್ಲಾ ಮಲ್ಲೇಶಿ, ಟೀವೀದಾಗೆ  ವೆಂಕಟ್ನ  ಸಂದರ್ಶನ ನಿನ್ನೆ ಪೂರಾ ದಿನ ನೋಡ್ತಿತ್ತು ಕಣ್ಲಾ. ಅವಾಗಿಂದ ಹೀಂಗೆ ಆಡ್ತ್ಯತಪ್ಪ.” ಅಂತ ಮಾತು ಆರಂಭಿಸ್ತು ಕೋಳಿ ಮುರುಗನ್!!

“ಇವ್ನ್ಯಾರ್ ಶಿವಾ ವೆಂಕಟ್ ಅಂದ್ರೆ?? ಪೇಮಸ್ಸು ಸ್ಯಾಂಡಲ್‌ವುಡ್ ಡೈರೆಕ್ಟರ್ , ಪಾಗಲ್ ಪ್ರೇಮಿ, ನಿಮ್ಮ್ ರಮ್ಮು ಲವ್ವರು, ನೀಲಿ ಅಂಗಿಯ ಸರದಾರ,ಹುಚ್ಚ ವೆಂಕಟ್ ಏನ್ಲಾ???” ಕೇಳ್ತು ಮಲ್ಲೇಶಿ…

“ಇಂಗಪ್ಪಾರು ಮಲ್ಲೇಶಣ್ಣ!! ಅದೇ ವೆಂಕಟ್ ಅಲಿಯಾಸ್ ಹುಚ್ಚ ವೆಂಕಟ್ ಕಣ್ಲಾ!! ಅದ್ಸರೀ .. ನಮ್ಮ್ ರಮ್ಮು ಎಲ್ಲಯ್ತೆ  ಈವಾಗ?? ಮಂಡ್ಯ ಎಲೆಕ್ಶನ್ದಾಗೆ ಸೊತ್ಮೇಲೆ ಪತ್ತೇನೆ ಇಲ್ಲ?” ಅಂತ ಮಲ್ಲೇಶಿಗೆ ಮರು ಪ್ರಶ್ನೆ ಹಾಕ್ತು ಮುರುಗನ್!!

“ನಿಂಗ್ಯಾಕಲಾ ರಮ್ಮುದು ಉಸಾಭರಿ ಬಿಕನಾಶಿ ನನ್ನ ಮಗನೇ… ರಮ್ಮು ಪಾರೀನ್ನಲ್ಲಿ ರಾಜ್ಯಸಾಸ್ತ್ರ ಓದ್ತಾಯ್ತೆ ಕಣ್ಲಾ!! ” ಹೇಳ್ತು ಮಲ್ಲೇಶಿ.

“ಓಹೋ…. ಹಂಗಾರೆ ನಿಮ್ಮ್ ರಾಹುಲ್ಲು, ನಮ್ಮ್  ರಮ್ಯನ್ ನೋಡ್ಬಿಟ್ಟು  ಮಾತಾಡಿ  ಕುಚ್ ಕುಚ್  ಮಾಡ್ಕಂಡು  ಬರಾಕೆ  ಓಯ್ತೇನ್ಲ ಮಲ್ಲೇಶಣ್ಣ” ಅಂತ ಬಾಣ ಬಿಡ್ತು ಕೋಳಿ ಮುರುಗನ್??!!!

“ಉಗೀರಿ ನನ್ನ ಮಗನ ಮಖಕ್ಕೆ!!! ರಮ್ಮು ಇರೋದೆ ಬ್ಯಾರೆ ದೇಸ್ದಾಗೆ ರಾಹುಲ್ಲು ಓಗಿರೋದೇ ಬ್ಯಾರೆ ದೇಸ್ದಾಗೆ ಸಿವಾ. ರಾಜ್ಕೀಯದವ್ರ ಹಿಂದೆ ಹೋಗೊಕೆ  ರಮ್ಮುನ ಏನ್ ನಿಮ್ಮ್ ರಾಧಿಕಾ ಕುಮಾರಸ್ವಾಮಿ ಅಂದ್ಕೊಂಡ್ಯೆನ್‌ಲಾ ಬೆಪ್ಪು ತಕ್ಕಡಿ ಮಗನೇ??? ” ಕೇಳ್ತು ಮಲ್ಲೇಶಿ…

“ಅಕಟಕಟಾ… ರಾಧಿಕಾ  ‘ಕುಮಾರಸ್ವಾಮಿ’ ಅಂತ ಹೇಳ್ಬೇಡ್ವೋ ಮಲ್ಲೇಶಣ್ಣ. ನಮ್ಮ್ ದೊಡ್ಡ್ ಗೌಡ್ರೆನಾದ್ರು ಕೇಳಿಸ್ಕಂಡ್ರೆ ನಿನ್ನ ವದ್ದು ಅಮ್ಕುಬುಡ್ತದೆ..!!! ” ಹೇಳ್ತು ಮುರುಗನ್…

“ನಡೀಲಾ ಶಿವಾ ಸಿನ್ಮಾದವ್ರ ಇಸ್ಯಾ ಮಾತಾಡ್ಬಿಟ್ಟು ಸಿನ್ಮಾ ನೋಡೋ ಮನಸ್ಸಾಗ್ತಯ್ತೆ. ಬಾರ್ಲಾ ಕೋಳಿ, ನಮ್ಮ್ ಅಲ್ಲೂ ಅರ್ಜುನ್ದು ತೆಲುಗು ಸಿನ್ಮಾ ನೋಡ್ಕೊಂಡು ಬರೋಣ… ಎತ್ತಲಾ ನಿನ್ನ ಗಾಡಿನ”  ಅಂತ ಹೇಳ್ತು ಮಲ್ಲೇಶಿ.

ಇಲ್ಲಿ ತನಕ ಸೈಲೆಂಟ್ ಆಗಿದ್ದ ಕಲ್ಲೇಶಿ ತನ್ನ ಕಣ್ಣನ್ ಕೆಂಪಗೆ ಮಾಡ್ಕೊಂಡು “ನನ್ನ್ ಮಕ್ಳಾ.. ಬಾಲೀವುಡ್,ಕಾಲಿವುಡ್,ಟೋಲೀವುಡ್ ಎಲ್ಲಾ ಕಡೆ ಐಟಮ್ ಸಾಂಗ್ ಬ್ಯಾನ್ ಆಗ್ಬೇಕು. ಇಡೀ ಕರ್ನಾಟಕನ್ ಬೆಂಡೆತ್ತ್ ಬಿಡ್ತೀನಿ ”  ಅಂತ ಒಂದೇ ಉಸ್ರಲ್ಲಿ ಹೇಳಿ ಮುಗ್ಸೊ ಹೊತ್ತ್ಕಾಗ್ಲೇ ಕೋಳಿ ಮುರುಗನ್ ಅಂಡ್ ಮಲ್ಲೇಶಿ ಕಾಲ್ಕಿತ್ಕೊಂಡಿದ್ದವು!!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!