Featured ಅಂಕಣ

ಗೀತ್ ನಯಾ ಗಾತಾ ಹೂಂ

ಹಾರ್ ನಹೀ ಮಾನೂಂಗಾ

ರಾರ್ ನಹೀ ಠಾನೂಂಗ

ಕಾಲ್ ಕೇ ಕಪಾಲ್ ಪರ್

ಲಿಖ್ ತಾಮಿಟಾತಾ ಹೂಂ

ಗೀತ್ ನಯಾ ಗಾತಾ ಹೂಂ!

80 ಹರೆಯದಲ್ಲೂಗೀತ್ ನಯಾ ಗಾತಾ ಹೂಂಎನ್ನುತ್ತಾ, ಜೀವನೋತ್ಸಾಹದಿಂದ ತುಂಬಿದ್ದ, ರಾಜಕಾರಣಿ ರೂಪದಲ್ಲಿದ್ದ, ಕವಿ, ಕನಸುಗಾರ, ದೇಶದ ಭದ್ರತೆಗೆ ಒಂದಿಷ್ಟು ಒತ್ತು ಕೊಟ್ಟುಸಾಕಾರಗೊಳಿಸಿದವರೇ ಅಟಲ್ ಬಿಹಾರಿ ವಾಜಪೇಯಿ.

ಅಟಲ್ ಸುಖಾಸುಮ್ಮನೆ ಪ್ರಧಾನಿಯಾದವರಲ್ಲ. ಅದರ ಹಿಂದೆ ನಲುವತ್ತು ವರ್ಷಗಳ ಮಹತ್ತರ ಹೋರಾಟವಿತ್ತು. ನೆನಪಿರಲಿ.. ಅಟಲ್ ಅಧಿಕಾರಾವಧಿಯಲ್ಲಿ ನಮ್ಮ ವಿದೇಶಿ ವಿನಿಮಯಮೀಸಲು ನಿಧಿ 105 ಶತಕೋಟಿ ಡಾಲರ್ ಮೀರುವ ಮೂಲಕ, ಭಾರತ ಸಾಲ ನೀಡುವ ಸಾಮರ್ಥ್ಯ ಪಡೆದಿತ್ತು. ಜಗತ್ತಿನ 6ನೇ ಮುಂಚೂಣಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು. ಅಟಲ್, “ಭಿಕ್ಷುಕರ ನಾಡು ನಮ್ಮದಲ್ಲ, ಕೈ ಚಾಚುವ ಪಾಡು ಎಮಗಿಲ್ಲ”  ಎಂಬುದನ್ನು ಅಕ್ಷರಶಃ ನಿರೂಪಿಸಿದರು.

Let’s go back in Time Machine, Fasten Your Seat belts.. Get Set and Go…

1996 ರಲ್ಲಿ 13 ದಿನಗಳಲ್ಲಿ ರಾಜೀನಾಮೆ, ಕೆಲವೇ ದಿನಗಳ ಅಧಿಕಾರಾವಧಿಯಲ್ಲಿ ತನ್ನ ಸ್ಥಾನ ಭದ್ರತೆಯ ಕುರಿತು ತಲೆಗೆಡಿಸಿಕೊಳ್ಳದ ಪ್ರಧಾನಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. 1998 ರಲ್ಲಿ ಮೆಜಾರಿಟಿಯಲ್ಲಿ ಗೆದ್ದು, ಪ್ರಧಾನಿಯಾಗಿ ಬಂದ ಬಳಿಕ ಭಾರತ ಕಂಡಿದ್ದು ಅಭಿವೃದ್ಧಿಯ ದಿನಗಳನ್ನು ಮಾತ್ರ.

1998 ರಲ್ಲಿ ನಡೆದ ಪೋಕ್ರಾನ್ ಅಣುಪರೀಕ್ಷೆ ಅದೊಂದು ಭೂತೋ ಭವಿಷ್ಯತಿ

ಆಗಲೇ ಹೇಳಿದಂತೆ ಸಮಯದ ಯಂತ್ರದಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತಿದ್ದೇನೆ.. 1964, ಚೀನಾ ತನ್ನ ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಅದಕ್ಕೆ ಪಾರ್ಲಿಮೆಂಟಿನಲ್ಲಿ ವಾಜಪೇಯಿಪ್ರತಿಕ್ರಿಯೆ ಇಷ್ಟೇ “An answer to an Atom Bomb is an Atom Bomb Alone” ಸಂಪೂರ್ಣ ಪಾರ್ಲಿಮೆಂಟಿನಲ್ಲಿ ಮಿಂಚಿನ ಸಂಚಾರವಾದ ಕ್ಷಣವದು. ಇಲ್ಲಿಯೇ ಭವ್ಯ ಭಾರತಕನಸುಗಾರನೊಬ್ಬನ ದರ್ಶನವಾಯಿತು.

ಕನಸು ನನಸಾದ ಕ್ಷಣ

1998 ಎಪ್ರೀಲ್ 6 ರಂದು ಪಾಕಿಸ್ತಾನ  ಎಂಬ ಮಿಸೈಲ್ ಪರೀಕ್ಷೆ ನಡೆಸಿತ್ತು. ಪಾಕಿಸ್ತಾನಕ್ಕೆ ಭಾರತ ಏನೆಂಬುದನ್ನು ತೋರಿಸಬೇಕೆಂಬ ಹಠ ಅಟಲ್ ಅವರಿಗೆ. ಏಪ್ರೀಲ್ 8 ರಂದು ವಾಜಪೇಯಿ, ಕಲಾಂ, ಆರ್. ಚಿದಂಬರಂ ಹಾಗು ಅನಿಲ್ ಕಾಕ್ಕೋಡ್ಕರ್ ಅವರುಗಳ ಬಳಿ ಅಣ್ವಸ್ತ್ರ ಪರೀಕ್ಷೆಯ ಸಿದ್ಧತೆಗಳನ್ನು ನಡೆಸಲು ಆದೇಶಿಸುತ್ತಾರೆ. ವಿಶ್ವಕ್ಕೆ ದೊಡ್ಡಣ್ಣ ಎನಿಸಿದ್ದ ಅಮೇರಿಕದ ಗುಪ್ತಚರ ಇಲಾಖೆ CIA(Central Intelligence Agency) ಕಣ್ತಪ್ಪಿಸಿ, ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂತಹ ವಿರೋಧಗಳು ವ್ಯಕ್ತವಾಗಬಹುದು ಎಂಬ ಅರಿವಿದ್ದರೂ ಸಹ, ದೇಶದ ಭದ್ರತೆಗೆ ಒತ್ತುಕೊಟ್ಟು ತನ್ನನ್ನೇ ರಿಸ್ಕ್’ಗೆ ಒಡ್ಡಿಕೊಂಡಿದ್ದರು ವಾಜಪೇಯಿ .

ಸಾಟಲೈಟ್’ಗಳಿಂದ ತಪ್ಪಿಸಿಕೊಂಡು ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮ ಚತುರ ರಾಜಕಾರಣಿ ಹಾಗೂ ಡಿ.ಆರ್.ಡಿ.ಓ.ದ ಮೇಧಾವಿ ವಿಜ್ಞಾನಿಗಳತಂಡ ನಡೆಸಿದ ಚಾಕಚಕ್ಯತೆಯ ಕೆಲಸ ನಮ್ಮನ್ನು ಬೆರಗಾಗಿಸದೇ ಇರದು. ಮೊದಲಿಗೆ, ಯಾವಾಗ ಸಿಐಎ ಸ್ಪೈ ಸಾಟಲೈಟ್ ಪೋಕ್ರಾನ್’ಗೆ ಫೋಕಸ್ ಆಗುತ್ತದೆ ಎಂದು ಅಧ್ಯಯನನಡೆಸಿ, ಸ್ಪೈ ಸಾಟಲೈಟ್ ಆಕ್ಟಿವಿಟಿ ಪೋಕ್ರಾನ್ ಮೇಲಿರುವುದಿಲ್ಲವೋ ಆಗ ನಡೆಯಿತು ಸಿದ್ಧತೆ. ಇವೆಲ್ಲದರ ಹಿಂದಿನ ಬೆಂಬಲ, ಮಾಸ್ಟರ್ ಮೈಂಡ್ ನಮ್ಮ ಅಟಲ್ ಜೀ. ಅವರು ಮನಸ್ಸು ಮಾಡದಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ ಬಿಡಿ. ಪುನಃ ನೆನಪಿಸುತ್ತಿದ್ದೇನೆ, 1996ರಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆಗೊಳಿಸುತ್ತಿದ್ದುದು ಸಿಐಎ ಗೆ ತಿಳಿದು ಭಾರತಕ್ಕೆ ವಾರ್ನ್ ಮಾಡಿದ್ದಲ್ಲದೇ, ತನ್ನ ಗುಪ್ತಚರ ಕಾರ್ಯವನ್ನು ಹೆಚ್ಚಿಸಿತ್ತು. ಇಂತಹಾ ಸಮಯದಲ್ಲಿ ಯಾರಿಗೂ ತಿಳಿಯದಂತೆ ಕೆಲಸವನ್ನು ಮಾಡುವುದು ಎಂತಹಾ ಕಷ್ಟದ ಕೆಲಸ ಎಂದು ಊಹಿಸಿಕೊಳ್ಳಿ. ಇವೆಲ್ಲವನ್ನೂಮೀರಿ ನಿಂತರು ಅಟಲ್. ಮೇ 11, 3.43.44 pm (ಭಾರತೀಯ ಕಾಲಮಾನ) ರಂದು ಅಣ್ವಸ್ತ್ರ ಸ್ಪೋಟವಾಯಿತು.

ವಿಶ್ವವೇ ಒಮ್ಮೆ ನಿಬ್ಬೆರಗಾಯಿತು, ವಿಜ್ಞಾನಿಗಳು ಹಾಗೂ ಅಟಲ್ ಜೀ ಗೆಲುವಿನಹೆಮ್ಮೆಯ ನಗೆ ಬೀರಿದರು, ಅಮೇರಿಕಾಕ್ಕೆ ಶಾಕ್ ನಿಂದ ಹೊರಬರಲು ಕಷ್ಟ ಸಾಧ್ಯವಾಯಿತು. “An answer to an Atom Bomb is an Atom Bomb Alone”  ಮಾತು ನಿಜವಾಯಿತು. ಭಾರತೀಯರು ತಮ್ಮ ಕನಸಿನ ಪ್ರಧಾನಿ ಬಂದರಲ್ಲಾ ಎಂದು ಸಂಭ್ರಮಿಸಿದರು.

ಕಾರ್ಗಿಲ್ ಯುದ್ಧದ ವಿಜಯದ ಮೂಲಕ, ‘ಪ್ರಧಾನಿ ಗ್ರಾಮ ಸಡಕ್ ಯೋಜನೆ’ ಹರಿಕಾರನಾಗಿ ಹಳ್ಳಿಹಳ್ಳಿಗೂ ರಸ್ತೆಗಳ ಮೂಲಕ ತಲುಪಿದ, ‘ಸರ್ವ ಶಿಕ್ಷಣ ಅಭಿಯಾನ’ದಿಂದ ಅಕ್ಷರದಾಸೋಹ ಉಣಬಡಿಸಿದ, ವಿದೇಶಿ ರಾಷ್ಟ್ರಗಳೊಡನೆ ದೇಶದ ಸೌಹಾರ್ದ ಬಾಂಧವ್ಯ ಹೆಚ್ಚಿಸಿದ, 22 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡದೇ ಇದ್ದ ಅಮೆರಿಕಾ ಅಧ್ಯಕ್ಷ ಭಾರತಕ್ಕೆ ಭೇಟಿನೀಡುವ ಮನಸ್ಸು ಮಾಡುವಂತೆ ಮಾಡಿದ, 13 ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದಾಗಲೂಶಾರ್ಟ್ ಕಟ್ದಾರಿ ಬಳಸದೇ ಇದ್ದ, ಯಾವುದೇ ಹಗರಣಗಳಸರಮಾಲೆ ಸೃಷ್ಟಿಸದೇ, ಒಂದೆರಡಲ್ಲ ಬರೋಬ್ಬರಿ 24 ಪಕ್ಷಗಳನ್ನು ಸಂಘಟಿಸಿ ಸಮರ್ಥ ಭಾರತವನ್ನು ಸೃಷ್ಟಿಸಿದವರು ಅಟಲ್ ಬಿಹಾರಿ ವಾಜಪೇಯಿ.

ಸ್ವಾತಂತ್ರ್ಯ ಹೋರಾಟದಲ್ಲಿ ವಾಜಪೇಯಿ

ಸ್ವತಃ ವಾಜಪೇಯಿ ಅವರೇ ಉಲ್ಲೇಖಿಸುತ್ತಾರೆ, “1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದೆ. 16ನೇ ವಯಸ್ಸಿನಲ್ಲಿ ಹೋರಾಟದಫಲವಾಗಿ ತಮ್ಮ ಹುಟ್ಟೂರಿನಲ್ಲಿ ಸೆರೆಮನೆವಾಸ ಅನುಭವಿಸಿದ್ದೆಎಂದು.

ವಿರೋಧಿಗಳ ಮನಗೆದ್ದ ಅಟಲ್

ಅಟಲ್ ಗೆ ಭಾರತ ರತ್ನ ಘೋಷಣೆಯಾದ ಸಂದರ್ಭ ಖಲೀದ್ ರಶೀದ್ ಫಿರಂಗಿ ಅವರ ಮಾತುಗಳಿವುಅಟಲ್ ಜೀಗೆ ಭಾರತ ರತ್ನ ಗೌರವವನ್ನು ನಾವೆಂದಿಗೂ ಸ್ವಾಗತಿಸುತ್ತೇನೆ. ನಾನುಅವರಿಂದ ಬಹಳಷ್ಟು ಕಲಿತಿದ್ದೇನೆ. ಎಂದಿಗೂ ಕೊನೆಯಾಗದ ಜೀವನ ಪಾಠಗಳನ್ನು ನನ್ನೊಳಗೆ ಬಿತ್ತಿದ್ದಾರೆ ಅಟಲ್. ಯುಪಿಎ ಆಡಳಿತದ ಸಮಯದಲ್ಲೇ ಗೌರವ ಅವರಿಗೆ ಬರಬೇಕಿತ್ತು” (“We welcome the government’s decision to honour Atalji. He has done a commendable job as prime minister of the country. I have learnt good lessons from his personality and these will have a lasting imprint on me. He should have been bestowed the Bharat Ratna during the UPA government itself,”).

ಪ್ರಧಾನಿ ಸ್ಥಾನ ರಾಷ್ಟ್ರದ ಅತ್ಯಂತ ಪ್ರಭಾವಿ ಹಾಗೂ ಪವಿತ್ರ ಸ್ಥಾನ, ಭದ್ರತೆಯ ಗೌಪ್ಯ ಮಾಹಿತಿಗಳ ಭಂಡಾರವದು. ಇವೆಲ್ಲದಕ್ಕೂ ಸಂಪೂರ್ಣ ನ್ಯಾಯ ಒದಗಿಸಿದವರೇ ಅಟಲ್ ಬಿಹಾರಿ ವಾಜಪೇಯಿ. ದೇಶವೆಲ್ಲ ಮಾತ್ರವಲ್ಲ, ಪಾಕಿಸ್ತಾನದ ಮುಷ್ರಫ್ ಕೂಡಾ ಅಟಲ್ ಜಪ ಮಾಡುವಂತೆ ಮಾಡಿ ಗಡಿಯಲ್ಲೊಂದಿಷ್ಟು ದಿಟ್ಟ ಉತ್ತರಗಳನ್ನು ನೀಡಿದ, ಆರ್ಥಿಕ ಕ್ಷೇತ್ರದಲ್ಲಿ ಭಾರತದಸ್ಥಾನವನ್ನು ಹಿಂದೆಂದೂ ಇಲ್ಲದಂತೆ ಉತ್ತಮಗೊಳಿಸಿದ, 80 ಯೌವ್ವನದಲ್ಲಿ ದೇಶವನ್ನೇ ಪ್ರೀತಿಯಿಂದ ಉನ್ನತಿಗೊಳಿಸಿದವರು ನಮ್ಮ ಪ್ರೀತಿಯ ಅಟಲ್ ತಾತ.

ನೀವೆಂದೂ  ನಮ್ಮ ಮನದಲ್ಲಿ, ನೀವು ಮಾಡಿದ ಕಾರ್ಯಸಾಧನೆಗಳ ಮೂಲಕ ಅಮರ…..

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!