ಕವಿತೆ

ಇದುವೆ ನಿಜವಾದ ಮಂದಿರ- “ಆಸ್ಪತ್ರೆ”

ಒಳಗೆ ಆರ್ತನಾದ, ಕೆಲವೆಡೆ ಆನಂದ..

ಹೊರಗೆ ಅಳುವು, ಕೆಲವರಲಿ ಆತಂಕ..!

 

ಜನನ ಮರಣಗಳ ಜೊತೆಗೆ ನೋಡುತ

ಬದುಕಿನಲಿ ಬದಲಾವಣೆ ತರಿಸುವ ಮಂದಿರ..!

 

ಲೌಕಿಕ ಬದುಕಿನ ಅಮಲಿನಲಿ,

ಇರುವ ನರಮಣಿಗಳಿಗೆ ‌ಕಣ್ತೆರೆಸುವ ಮಂದಿರ…!

 

ಜಾತಿ-ಧರ್ಮದ ಕೊಳಕನು ತೊಳೆಯಲೆಂದೇ

ಇರುವ ವೈದ್ಯರು, ನರ್ಸ್ಗಳು, ಕೊನೆಗೆ ಆಯಾಗಳು..

ರಾಮ-ರಹೀಮ-ಏಸು ಜೊತೆಗಿರುವ ಫೋಟೋ ಫ್ರೇಮ್ ಗಳು..!

 

ಸಾವಿನ ಬಾಯಿಗೆ ತುತ್ತಾದವನಿಗೆ

ರಕ್ತ ನೀಡಿದವನ್ಯಾರು? ಯಾವ ಜಾತಿ-ಯಾವ ಮತ?

ಪ್ರಜ್ಞಾಹೀನನಂತೆ ಮಲಗಿದವನಿಗೆ ನೆನೆಪಾದದ್ದು ಯಾವ ದೇವರು ?

ಆಗ ,ಆ ಕ್ಷಣದಲ್ಲಿ ಅರಿವಾಗಲಿಲ್ಲ..!

 

ಬದುಕಿ ಬಂದ ಹಮ್ಮಿನಲಿ

ಅಧರ್ಮ ಅನ್ಯಾಯ ಮಾಡುವುದು ಬಿಡಲಿಲ್ಲ..

ಅನ್ಯಧರ್ಮದವರನ್ನು ಹಂಗಿಸುವುದು ನಿಲ್ಲಿಸಲಿಲ್ಲ…!

 

ಇನ್ನೂ ಬದಲಾಗಲಿಲ್ಲ,

ಸಾವಿನ ದವಡೆಗೆ ಹೋಗಿ ಬಂದರೂ ಮನ ಬದಲಾಗಲಿಲ್ಲ..

ಇನ್ನೂ ಅರಿಯಲಿಲ್ಲ,

ಮಾನವೀಯತೆಯ ಮೌಲ್ಯವನ್ನು ಅರಿಯಲಿಲ್ಲ..!

ಇನ್ನಾದರೂ ಬದಲಾಗಿ

ಧರ್ಮದ ಲೇಪನದಿಂದ ಜನರ ನೋಡುವುದನ್ನು ನಿಲ್ಲಿಸಿ….

– ಸಿಂಧು ಭಾರ್ಗವ್.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!