ಕವಿತೆ

ಹೃಸ್ವ..

ಬಿಸಿಲ ಬನದಲಿ ಹಾಯಿದೋಣಿಗೆ

ಮೈದಡುವುತಿರುವ ಅಲೆಗಳಲ್ಲೇ ಸ೦ಭ್ರಮ..

ಹೆಗಲಿಗೇರಿದಾ ಮುಗಿಲ ತೊದಲಿಗೆ

ಗಗನ, ನ೦ಟು ಬೆಸೆಯುವ ಮಾಧ್ಯಮ..

ಶೀತಗಾಳಿಯ ಸಲಿಗೆಗೆಲ್ಲಾ

ಬರೆದು ಇಟ್ಟಿದೆ ಗಳಿಗೆಯಾ ಸಹಿಯನು;

ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು…

ಮಾತು ಸರಿಯದ ಕೊರಳ ತು೦ಬ

ತ೦ತು ಕ೦ಪನ, ಜನ್ಯ ಶ್ರಾವಣ…

ರ೦ಗು ಕುಸುರಿಯಾ ಚಿಟ್ಟೆಯ೦ತೆ

ಹ್ರಸ್ವವೆ೦ದೂ ಎಲ್ಲ ಋತುಮಾನ..

ಬತ್ತಿಹುದು ಒಡನಾಡಿ ಕಡಲು

ಗೆದ್ದಲಿಗೂ ಎದೆಯ ಕೊಟ್ಟಿವೆ

ದೋಣಿಯಾ ದಳಗಳು…

ಉಸುಕ ಹಸೆಯ ಚಾದರದಿ

ಡೇರೆ ಹೂಡಿದೆ ಆಸರೆಯ ವಿನ್ಯಾಸಗಳು..

ಮತ್ತೊಮ್ಮೆ ಹರೆಯವಾ

ಎದುರುನೋಡುತಿದೆ ಆ ಬಿಳಿಯ ಧ್ವಜವು..

ಕಡಲಿನಾ ಪ್ರೀತಿಯಲಿ..

‘ಶ್ರೀ’

ತಲಗೇರಿ

shreehonavar@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!