ಕವಿತೆ

ಏನೇ ಆಗಲಿ ನೀ ನಮ್ಮವನು

ಕಾವಿಯ ಕಾನದಿ ಅಡಗಿಸಿಟ್ಟೆವು,

ಮಂತ್ರದ ಬೇಲಿಯ ಹಾಕಿಬಿಟ್ಟೆವು,

ಗುಡಿಯ ಗೋಡೆಯಲಿ ಕೂಡಿಹಾಕಿದೆವು,

ಏನೇ  ಆಗಲಿ  ನೀ ನಮ್ಮವನು…

 

ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು,

ಭಾರಿ ಕೋರಿಕೆಗೆ ಮಹಲಿರಬೇಕು,

ಬಳಿಯಲಿ ಕಾಣಲು ಅನುಮತಿಬೇಕು,

ಜೇಬಿನ ತುಂಬಾ ನೋಟಿರಬೇಕು

 

ಆದರೂ ಬರುವೆವು … ಏಕೆ.. ಏನೇ  ಆಗಲಿ  ನೀ ನಮ್ಮವನು…

 

ನೀನಾರೆಂದೇ ತಿಳಿದಿಲ್ಲ,

ನಿನ್ನ ಅಭಿಪ್ರಾಯವೂ ಗೊತ್ತಿಲ್ಲ,

ಅವನ ಹೊಡೆದು, ಇವನ ಕಡಿದು

ನಿನ್ನ  ಹೆಸರನೇ ನುಡಿಯುವೆವು,

 

ಏಕೆ … ಏನೇ  ಆಗಲಿ  ನೀ ನಮ್ಮವನು…

 

ತಿಲಕ ಇಟ್ಟರೆ ಹಿಂದೂ ನಾನು

ಟೋಪಿ ಹಾಕಿದೊಡೆ ಮುಸ್ಲಿಮನು ,

ಕೊರಳಿಗೆ ಶಿಲುಬೆ ಬೀಳುತ್ತಲೇ

ನಾ ಈಸಾಯಿಯಾಗಿಬಿಡುವೆನು,

ನನಗೆ ನಾನಾರೆಂದೂ ತಿಳಿದಿಲ್ಲ

 

ಆದರೆ  ನಿನ್ನನಂತೂ ನಾ ಬಿಡಲೊಲ್ಲೆ,

ಏಕೆ… ಏನೇ  ಆಗಲಿ  ನೀ ನಮ್ಮವನು…

Facebook ಕಾಮೆಂಟ್ಸ್

ಲೇಖಕರ ಕುರಿತು

Adarsh B Vasista

I am an engineer by training, a researcher by profession and a writer by passion. Hailing from Hassan, I, presently is a PhD student at Indian Institute of Science Education ad Research (IISER) Pune.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!