X

ಹನಿಬರಹ – ೨

ರವಿವಾರ

ಸೂರ್ಯಕಿರಣಗಳು ಮುತ್ತಿಟ್ಟಾಗಲೇ

ಅರಿವಾದದ್ದು ನನಗೆ ಬೆಳಗಾಯಿತೆಂದು

ರವಿವಾರ; ರವಿಯೇ ಬರಬೇಕಾಯ್ತು…

ಸ್ವಪ್ನಸುಂದರಿಯ ಮೃದು ತೋಳಿನಿಂದ

ನನ್ನ ಬಿಡಿಸುವ ಪ್ರಯತ್ನಕ್ಕಿಂದು

 

ಅಲೆಮಾರಿ

ಅಲೆಯುತಿಹೆ ನಿನ್ನೆದೆಯ ಬೀದಿಯಲಿ

ಅಲೆಮಾರಿಯಂತೆ

ನೀಡೆನಗೆ ಒಂದಿಷ್ಟು ಜಾಗವ

ಇಳಿಸುವೆ ನನ್ನ ಕನಸುಗಳ ಕಂತೆ

ಕಂಗಳಲಿ ಕಳೆದಾಗ…

ನಾ ನಿನ್ನ ಕಂಗಳಲಿ

ಕಳೆದುಹೋಗೋ ಆ ದಿನ

ಹುಡುಕುವ ಯತ್ನವನು

ಖಂಡಿತ ಮಾಡೆ ನಾ…

ಬಾನು ನಾಚಿದಾಗ

ಮೂಡಣ ಬಾನು

ನಾಚಿ ಕೆಂಪೇರಿದೆ,

ಸೂರ್ಯ ಈ ಮುಂಜಾನೆಯಲ್ಲೇ

ಮುದ್ದಿಸಿದನೇ ಅವಳ…???!!!

ನೆನಪಿನ ಸೆರೆ

ತುಂತುರಿನ ಸ್ಪರ್ಷಕ್ಕೆ

ಅರಳಿತ್ತು ಹೂಬನವು

ನಿನ್ನ ನೆನಪಿನ ಸೆರೆಗೆ

ಮರಳಿತ್ತು ಈ ಮನವು

 

ಮಲ್ಲಿಗೆ ಮಾಲೆ…

ಸಹ್ಯಾದ್ರಿಯ ಒಡಲಿಂದ

ಹಾಲ್ನೊರೆಯ ಜಲಪಾತ ಧುಮ್ಮಿಕ್ಕಿದಂತೆ

ಅವಳ ಇಳಿಬಿಟ್ಟ ಕೂದಲನ್ನು

ಮಲ್ಲಿಗೆಯ ಮಾಲೆ ಅಲಂಕರಿಸಿತ್ತು

ಬರೆಯದ ಸಾಲು…

ನಾ ಬರೆಯದೆ ಉಳಿದ ಸಾಲುಗಳೆಲ್ಲ

ಇರುವುದು ನಿನ್ನದೇ ಕುರಿತು

ನಾ ಬರೆದು ಹರಿದ ಹಾಳೆಗಳೆಲ್ಲ

ನಿನ್ನದೇ ನೆನಪಿನ ಗುರುತು

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post