X

ಅಮವಾಸ್ಯೆ..

ಮುಗಿಲೂರಿನ ತುಂಬ

ಚುಕ್ಕಿ ದೀಪಗಳ ತುಂಬು ರಂಗೋಲಿ

ಮಡಿದಿದ್ದ ಚಂದಿರನ

ನೆನಪಿನಲಿ ಸಲ್ಲಿಸುತಿವೆ ಶ್ರದ್ದಾಂಜಲಿ!

 

ಗೂಬೆಗಳು ಕೂಗುತಿವೆ,

ಹಕ್ಕಿಗಳು ಮೌನ ಹೊದ್ದಿವೆ  ಶೋಕದಲಿ

ಕಂಬನಿ ಮಿಡಿಯುತಿದೆ ತಂಗಾಳಿ

ಶಶಿಯ ತವರೂರಾದ ವಸುಧೆಯಲಿ!

 

ಭೊರ್ಗರೆಯುತಿದ್ದ ಕಡಲು

ಶಾಂತವಾಗಿ ಮಲಗಿದೆ ಬೇಸರದಲಿ

ಮಲಗಿದೆ ಮಗುವೊಂದು

ಮತ್ತೆ ಬರುವ ಚಂದ್ರಮ ಎಂಬ ಕನಸಲಿ

 

-ಪ್ರಕಾಶ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post