X

ಮೊಬೈಲ್

ಕೈಯಲಿ ಹಿಡಿದರೆ ಮೊಬೈಲು ಫೋನನು
ಮೈಮರೆಯುವರು ಜನರೆಲ್ಲ
ಜೈ ಜೈ ಎಂದಿದೆ ಜಂಗಮವಾಣಿಗೆ
ಥೈತಕ ಕುಣಿಯುತ ಜಗವೆಲ್ಲ !

ಮಾಯಾಪೆಟ್ಟಿಗೆ ಕೈಯೊಳಗಿದ್ದರೆ
ಊಟವು ನಿದ್ರೆಯು ಬೇಕಿಲ್ಲ
ಹಾಯಾಗಿರುವರು ಸಮಯವ ಕೊಲ್ಲುತ
ಕೆಲಸವ ಮರೆತಿಹ ಜನರೆಲ್ಲ !

ವಸ್ತುವ ಕೊಳ್ಳಲು ಅಂಗಡಿ ಅಂಗಡಿ
ಸುತ್ತುವ ಕೆಲಸವು ಈಗಿಲ್ಲ
ಸುಸ್ತೇ ಇಲ್ಲದೆ ಆನ್ಲೈನ್ ಆರ್ಡರು
ಮಾಡುತಲಿದ್ದರೆ ಸಾಕಲ್ಲ!

ಬಗೆ ಬಗೆ ಆಟವ ಬಗೆ ಬಗೆ ನೋಟವ
ಕೈಯೊಳೆ ತೋರುವ ಅಂಜನವು
ನಗೆಯುಕ್ಕಿಸುತಲಿ ಜನಗಳ ಮನಸನು
ಮುದಗೊಳಿಸುತಲಿಹ ಸಾಧನವು!

ಮಿತಿಯೊಳಗಿದ್ದರೆ ಎಲ್ಲವು ಹಿತವೇ
ಮುಂದಕು ಇದನ್ನು ಬಳಸುತಿರಿ
ಅತಿಯಾದರೆ ಅಮೃತವೂ ವಿಷವೇ
ಎನ್ನುವ ಸತ್ಯವ ಮರೆಯದಿರಿ!

-ಅನಂತ ಕೃಷ್ಣ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post