X

ಯುಗಾದಿ ಹಾಯ್ಕುಗಳು

(೦೧)
ಬಂತು ಯುಗಾದಿ
ಬೇವು ಬೆಲ್ಲ ತಗಾದೆ
– ಸಿಕ್ಕದ ಲೆಕ್ಕ !

(೦೨)
ಬೇವಿನ ಹೂವ್ವ
ವಾರ್ಷಿಕ ಸಂಭ್ರಮಕೆ
– ಬೆಲ್ಲದ ನಗು ..!

(೦೩)
ಹಬ್ಬದುಡುಗೆ
ಹಬ್ಬದಡಿಗೆ ಭರ್ಜರಿ..
– ಕೊಂಡೆಲ್ಲ ತಂದು !

(೦೪)
ಯಾರಿಗೆ ಬೇಕು
ಯುಗಾದಿ ಆಶೀರ್ವಾದ ?
– ಬಿಡುವೆ ಇಲ್ಲ..

(೦೫)
ಶುಭ ಕೋರಿಕೆ
ಉಳಿತಾಯ ಖರ್ಚಲಿ
– ‘ಇ’ವಿನಿಮಯ !

(೦೬)
ದೂರದೂರಲಿ
ಅವರವರ ಹಬ್ಬದೆ ;
– ಹೆತ್ತವರೆಲ್ಲಿ ?

(೦೭)
ಮಾವಿನ ಎಲೆ
ಬೇವಿನೆಲೆ ತೋರಣ.
– ಹಳತ ಮೌನ..

(೦೮)
ಬಿರು ಬಿಸಿಲು
ಹೊಸತಿಗೆ ಹೊಸಿಲು
– ಮುನ್ನೆಚ್ಚರಿಕೆ !

(೦೯ )
ಹಬ್ಬದ ದಿನ
ಎಲ್ಲರ ದೋಸೆ ತೂತು
– ಒಂದೇ ಅಡಿಗೆ !

(೧೦)
ಕ್ಷುಲ್ಲಕ ನರ
ವರ್ಷದಲೆಂತ ಯುಗ ?
– ಹುಚ್ಚು ಬಯಕೆ ||

– ನಾಗೇಶ ಮೈಸೂರು

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post