X

ದೌರ್ಜನ್ಯ

ಸುತ್ತತುಂಬಿದೆ

ಮುಗಿಲೆತ್ತರ ಧೂಳು

ಇದ್ದ ಮರಗಿಡ

ಹಸುರ ಸಸ್ಯ ಶ್ಯಾಮಲೆ

ಕೆಂಬಣ್ಣಕ್ಕೆತಿರುಗಿದೆ

ಉರುಳಿ ಬಿದ್ದು

 

ಇದ್ದಾನೆ-ಇಲ್ಲೇ

ನೀರುಣಿಸಿದವ

ಮೈ ತಡವಿದವ

ಹೊತ್ತುಕೈಯತಲೆಯ ಮೇಲೆ

ಪ್ರೇಕ್ಷಕನಂತೆ,ಮೂಲೆಯಲ್ಲಿ

 

ಬತ್ತಿದಕಣ್ಣೀರು

ಭಾವನೆಗಳು ಸ್ಥಬ್ಧ

ಕಬ್ಬಿಣದ ಕೈ ಜರಿಯುತ್ತಿದೆ

ಮನೆ-ಮಠ

ಗಿಡ-ಮರಗಳ

ಹೊಡೆತ ತಾಳಲಾರದೆ ನಲುಗುತ್ತಿದೆ

ಜೀವ-ನಿಜರ್ೀವ

 

ಸಮತ್ತಟ್ಟು ನೆಲ

ಮೇಲೇರುತ್ತಿರುವ

ಒಂದೊಂದೇಇಟ್ಟಿಗೆ

ಸಮಾಧಿಯ ಮೇಲೆ

ಆಧುನಿಕತೆಯ ಸೋಗು

ತಂಗಾಳಿ ಬೀಸುತ್ತಿದ್ದಲ್ಲಿ

ಕಪ್ಪು ಹೊಗೆಯ

ರೌದ್ರಾವತಾರ!

 

Raghavendra Prasad

rpneriya@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post