X

  ಸುಬ್ಬಂಣನ ತ್ರಿಪದಿಗಳು

೧.ನಗೆಯುಳ್ಳ ಮೊಗ ಚೆಂದ | ಚಿಗುರುಳ್ಳ ಮರ ಚೆಂದ

   ಅಗರು ಗಂಧವೆ ಚೆಂದ ಪೂಜೆಯಲಿ ಸಜ್ಜನರ

   ಬಗೆಯು ಬಲು ಚೆಂದ ಸುಬ್ಬಂಣ ||

೨.ಕ್ರಿಸ್ತನೆಂದರು ಕೆಲರು | ಅಲ್ಲನೆಂದರು ಹಲರು

   ಕೃಷ್ಣನೇ ಪರಮಾತ್ಮನೆಂದು ಹಲಜನರೆನುವ

   ತತ್ವ ತಾನೊಂದೆ ಸುಬ್ಬಂಣ ||

೩.ನೋಟುಗಳ ಬಲದಿಂದ | ಓಟುಗಳ ಸಂಗ್ರಹಿಸಿ

   ಪೀಠವೇರುವ ಮಂದಿಯಿಂದ ದೇಶಕ್ಕೆ ಶನಿ-

    ಕಾಟವೆಂದೊರೆದ ಸುಬ್ಬಂಣ ||

೪.ಮಣಿಯು ಮಕುಟಕೆ ಮುಖ್ಯ | ಗಣವು ವೃತ್ತಕೆ ಮುಖ್ಯ

   ಗಣಿತವೇ ಮುಖ್ಯ ಜ್ಯೋತಿಷ್ಯದಲಿ ಮನುಜಂಗೆ

   ಗುಣವೆ ಬಲು ಮುಖ್ಯ ಸುಬ್ಬಂಣ ||

೫.ಹೆಂಡವನು ಹೀರಿ ಪರ | ಹೆಂಡಿರನುರಮಿಸಿ ಜನ

   ಮಂಡೆಯೊಡೆದಂಡೆಲೆವ ಗಂಡುಗಳು ದೇಶಕ್ಕೆ

   ದಂಡ ನೋಡೆಂದ ಸುಬ್ಬಂಣ ||

೬.ನಯವಿರದ ಮಾತುಗಳು | ಲಯವಿರದ ವಾಕ್ಯಗಳು

   ಭಯವಿರದ ಭಕ್ತಿ ಇವುಗಳಿಂ ಸಮಯವದು

   ವ್ಯಯವು ಕೇಳೆಂದ ಸುಬ್ಬಂಣ ||

  • ಬಲ್ನಾಡು ಸುಬ್ಬಣ್ಣ ಭಟ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post