Author - Rangaswamy mookanahalli

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾಸಿಗೆ ಇದ್ದಷ್ಟು ಕಾಲು ಚಾಚು 

ಪಾಲಿಗೆ ಬಂದದ್ದು ಪಂಚಾಮೃತ, ಇದ್ದಿದ್ದರಲ್ಲಿ ಬದುಕುವುದು ಕಲಿಯಬೇಕು ಎನ್ನುವುದನ್ನ ತಲೆಮಾರಿನಿಂದ ತಲೆಮಾರಿಗೆ ಹೇಳಿಕೊಡುತ್ತ ಬಂದರು. ನಾವು ಕೂಡ ನಮ್ಮ ಹಿರಿಯರು ಹೇಳಿದ್ದ ಪಾಲಿಸುತ್ತಾ ಬಂದೆವು. ಆದರೆ ಕಳೆದ ಎರಡು ಅಥವಾ ಮೂರು ದಶಕದಲ್ಲಿ ಜಗತ್ತು ಬದುಕುವ ರೀತಿಯೇ ಬದಲಾಗಿ ಹೋಗಿದೆ. ಇದ್ದಿದ್ದರಲ್ಲಿ ಬದುಕಬೇಕು ಎನ್ನುವ ಜಾಗದಲ್ಲಿ ಸಾಲ ಮಾಡಿಯಾದರೂ ಸರಿಯೇ ಗಡಿಗೆ ತುಪ್ಪ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮರಳಿ ಯತ್ನವ ಮಾಡು ನೀ ಮನುಜ 

ಬದುಕು ಹರಿಯುವ ನೀರಿನಂತೆ ಇರಬೇಕು. ನಿಂತ ನೀರಿನಲ್ಲಿ ಕ್ರಿಮಿಗಳು ಜನಿಸಲು ಶುರುವಾಗುತ್ತವೆ, ವಾಸನೆ ಬೀರಲು ಕೂಡ ಪ್ರಾರಂಭವಾಗುತ್ತದೆ. ಹರಿಯುವ ನೀರಿನಲ್ಲಿ ಈ ಸಮಸ್ಯೆಗಳು ಇರುವುದಿಲ್ಲ. ಬದುಕೆಂದರೆ ಸದಾ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಕೂಡ ಬರುವುದಿಲ್ಲ. ಸಹಜವಾಗೇ ಏಳುಬೀಳುಗಳು ಇದ್ದೆ ಇರುತ್ತವೆ. ಸೋಲು ಮತ್ತು ಗೆಲುವು ಒಂದರ ಹಿಂದೆ ಇನ್ನೊಂದು ಸಜ್ಜಾಗಿ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಮುಳ್ಳಿಲ್ಲದ ಗುಲಾಬಿ ಉಂಟೆ? 

ಬದುಕೆಂದರೆ ಅದೊಂದು ಸುಖ-ದುಃಖದ ಮಿಶ್ರಣ. ಸುಖದ ಮಹತ್ತ್ವ ತಿಳಿಯಲು ದುಃಖದ ಆವಶ್ಯಕತೆಯಿದೆ. ದುಃಖವೇ ಇರದಿದ್ದರೆ ಸುಖಕ್ಕೆ ಅರ್ಥವೇ ಇರುತ್ತಿರಲಿಲ್ಲ. ಜನ ಸುಖವನ್ನ ಬಯಸುತ್ತಲೂ ಇರಲಿಲ್ಲ. ಆ ಮಟ್ಟಿಗೆ ಸುಖದ ಆಸ್ವಾದನೆಗೆ, ಸುಖದ ಮಹತ್ತ್ವದ ಅರಿವು ಸಿಗಲಾದರೂ ಒಂದಷ್ಟು ದುಃಖ ಬದುಕಿಗೆ ಬೇಕು. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಚಿನ್ನ. ಪೂರ್ಣ ಚಿನ್ನದಿಂದ  ಆಭರಣ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ

ಈವತ್ತು ನಮ್ಮ ಬದುಕು, ನಮ್ಮ ಹಿರಿಯರು ಬದುಕಿದ ರೀತಿಗಿಂತ ಬಹಳ ಭಿನ್ನವಾಗಿದೆ. ಅವರು ವಿಷಯ ಯಾವುದೇ ಇರಲಿ ಅದನ್ನು ಸಲೀಸಾಗಿ ತೆಗೆದುಕೊಳ್ಳುತ್ತಿರಲಿಲ್ಲ. ವಿಷಯ ಸಾಧನೆ ಆಗುವವರೆಗೆ ಗೆದ್ದೆವೆಂದು ಬೀಗುತ್ತಿರಲಿಲ್ಲ. ಸಮಾಜದಲ್ಲಿ ಎಂದಿನಿಂದಲೂ ಒಂದಷ್ಟು ಸಂಖ್ಯೆಯ ಜನ ಕೆಲಸ ಆಗುವುದಕ್ಕೆ ಮುಂಚೆಯೇ ವಿಜಯಿಯಾದಂತೆ ಮರೆದಾಡುವವರು ಇದ್ದರು. ಅಂತವರನ್ನು ಕುರಿತು ಗೆಲುವಿಗೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಬರಿ ಕೈಗಿಂತ ಹಿತ್ತಾಳೆ ಕಡಗ ವಾಸಿ

ಬದುಕಲ್ಲಿ ನಾವು ಬಯಸಿದ್ದೆಲ್ಲಾ ಖಂಡಿತ ಸಿಗುವುದಿಲ್ಲ. ಹಾಗೆಂದು ನಿರಾಶರಾಗಬೇಕಿಲ್ಲ. ಬದುಕಿನ ನಿಯಮವೇ ಅದು. ಬಯಸಿದ್ದೆಲ್ಲ ಸಿಕ್ಕರೆ ಅದಕ್ಕೆ ನಾವು ಕೊಡುವ ಗೌರವ ಕೂಡ ಕಡಿಮೆಯಾಗುತ್ತದೆ. ಕೊನೆಗೂ ಬದುಕೆಂದರೆ ಪ್ರಯತ್ನವಷ್ಟೆ. ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರಬೇಕು, ನಾವು ಅಂದು ಕೊಂಡದ್ದ ಮಾಡಲು ಸದಾ ಶ್ರಮಿಸುತ್ತಿರಬೇಕು. ಆ ದಾರಿಯಲ್ಲಿ ಹಲವು ಬಾರಿ ನಿರೀಕ್ಷಿತ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಸಮಯಕ್ಕಿಂತ ಬೇರೆ ಔಷಧವಿಲ್ಲ!

ಮನುಷ್ಯನ ಜೀವನದಲ್ಲಿ ಒಂದಲ್ಲ ಹಲವು ನೋವುಗಳು ಸಹಜ. ಬದುಕಿನುದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ನೋವು ಎಲ್ಲರನ್ನೂ ಕಾಡಿಯೇ ಕಾಡಿರುತ್ತದೆ. ನೋವಿನ ಆ ದಿನ ಮತ್ತು ಮನಸ್ಥಿತಿ ಸದಾ ಇದ್ದರೆ? ಬದುಕು ಅಸಹನೀಯವಾಗುತ್ತದೆ. ಬದುಕಿನಲ್ಲಿ ನಾವು ಸಾಧಿಸಬೇಕು ಎಂದುಕೊಂಡದ್ದನ್ನು ಮಾಡಲು ಅಸಾಧ್ಯವಾಗುತ್ತದೆ. ಇಂತಹ ನೋವು ಅಥವಾ ಕಹಿ ಘಟನೆ ಮರೆಯಲು ಮತ್ತು ಎಂದಿನಂತೆ ಜೀವನ ಸಾಗಿಸಲು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ! 

ಬದುಕು ಎಷ್ಟು ವಿಚಿತ್ರ ಅಂತ ಹಲವು ಸಲ ಅನ್ನಿಸುತ್ತೆ. ಅದಕ್ಕೆ ಕಾರಣ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಸಿಗಬೇಕಾದ ಮನ್ನಣೆ ಆತನಿಗೆ ಸಿಗಬೇಕಾದ ಹಣ ಸಿಗದೇ ಹೋಗುವುದು. ಇದು ಹಿಂದಿನಿಂದಲೂ ನಡೆದು ಬಂದಿದೆ ಅನ್ನುವುದಕ್ಕೆ ಮೇಲಿನ ಗಾದೆಯೇ ಸಾಕ್ಷಿ. ಹಿಂದೆ ವೃತ್ತಿಯಿಂದ ವ್ಯಕ್ತಿಯ ಪರಿಚಯ ಆ ಸಮುದಾಯದಲ್ಲಿ ಇರುತ್ತಿತ್ತು. ಹಾಲು ಮಾರುವವನನ್ನ ಹಾಲಪ್ಪ ಎಂದು, ಮಡಿಕೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಬೀದೀ ಕೂಸು ಬೆಳೀತು, ಕೋಣೇ ಕೂಸು ಕೊಳೀತು!

ಇಂದಿನ ಗಾದೆ ವಿವರಿಸಲು ಒಂದು ಸಣ್ಣ ಕಥೆ ನಿಮಗೆ ಹೇಳಬೇಕಿದೆ. ಒಂದೂರು ಆ ಊರಿಗೊಬ್ಬ ರಾಜ. ಅವನಿಗೊಬ್ಬ ಮಂತ್ರಿ. ಒಂದು ದಿನ ರಾಜ ತನ್ನ ಮಂತ್ರಿಯ ಜೊತೆ ಬೇಟೆಗೆ ಹೊರಡುತ್ತಾನೆ. ಬೇಟೆಯೆಲ್ಲ ಮುಗಿದು ಅರಣ್ಯದಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ ತನ್ನ ಮಂತ್ರಿಯ ಕುರಿತು ಹೇಳುತ್ತಾನೆ: “ಮಂತ್ರಿಗಳೇ ನಮ್ಮ ಅರಮನೆಯ ಹಿಂದಿನ ತೋಟದಲ್ಲಿ ಎಷ್ಟೊಂದು ಜನ ಮಾಲಿಗಳು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಹಾವಪ್ಪ ಅಲ್ಲ ನಾಗಪ್ಪ

ಬದುಕು ಎಷ್ಟು ಸುಂದರ. ನಮ್ಮ ಹಿರಿಯರು ಒಂದಲ್ಲ ಹಲವು ಹತ್ತು ಬವಣೆಗಳನ್ನ ಅನುಭವಿಸಿ, ನಮ್ಮ ಮುಂದಿನ ಪೀಳಿಗೆ ಮತ್ತೆ ಅದೇ ಕಷ್ಟದ ಹಾದಿ ತುಳಿಯದಿರಲಿ ಎನ್ನುವ ಭಾವನೆಯಿಂದ ತಮ್ಮ ಜೀವನದ ಸಾರವನ್ನ ಆಡು ಮಾತಿನಲ್ಲಿ ಮತ್ತು ಗಾದೆಯ ರೂಪದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ. ಅವರು ನಮಗೆ ನೀಡಿರುವ ಇಂತಹ ಬೆಲೆ ಕಟ್ಟಲಾಗದ ಮಾತುಗಳನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಕೋರ್ಟು...

ಅಂಕಣ

ನೀರಿಗಿಳಿದ ಮೇಲೆ ಮಳೆಯಾದರೇನು? ಚಳಿಯಾದರೇನು?

ಅದು ೨೦೦೩ರ ಡಿಸೆಂಬರ್ ತಿಂಗಳ ಕೊನೆಯ ದಿನ. ವರ್ಷದ ಕೊನೆಯ ದಿನದಂದು ಜಗತ್ತಿನೆಲ್ಲೆಡೆ ವಿವರಿಸಲಾಗದ ಹುಚ್ಚು ಉನ್ಮಾದ. ಜಗತ್ತನ್ನು ಗೆದ್ದೇ ಬಿಟ್ಟೆವು ಎನ್ನುವಂತ ಹುಮ್ಮಸ್ಸು. ಯುವಜನತೆಯಂತೂ ನಾಳೆ ಕಂಡವರಾರು ಎನ್ನುವ ಫಿಲಾಸಫಿ ಯಲ್ಲಿ ನಿತ್ಯ ಬದುಕುವರು. ಇನ್ನು ವರ್ಷದ ಕೊನೆಯ ದಿನ ಅಂದ ಮೇಲೆ ಕೇಳುವುದಿನ್ನೇನು? ೨೦೦೩ರ ವೇಳೆಗೆ ನಾನು ಬಾರ್ಸಿಲೋನಾ ಸೇರಿ ಆಗಲೇ ನಾಲ್ಕು...