X

ಮುಂಡಾ ಮುಚ್ತು ಪ್ರಾರಬ್ಧ ಮುಂಡೇವಾ…

ಥತ್ತೇರಿಕೆ!! ಏನಾಯ್ತ್ಲಾ ಗೋಪಾಲಣ್ಣ ಇವಕ್ಕೆ.??? ಇರೋ ಚೂರು ಪಾರು ಮರ್ವಾದೆನಾ ಟೌನಾಲ್ ಮುಂದೆ ಅರಾಜು ಹಾಕವ್ವೆ!!???? ಮಾಡಕ್ ಬ್ಯಾರೆ ಕ್ಯಾಮೆ ಇದ್ದಾಂಗಿಲ್ಲ ಇವಕ್ಕೆ???

ಅಲ್ಲಾ ಸಿವನೇ ಏನಾಯ್ತು ಅಂತ ಬುಡ್ಸಿ ಒದರ್ಲಾ ತಿರುಬೋಕಿ ನನ್ನ ಮಗನೇ ಅಂತು ಗೋಪಾಲಣ್ಣ ಕೋಳಿ ಮುರುಗನ್ ಗೆ.

ಬೀಫ್ ತಿಂದ ಅಂತ ಯುಪಿನಾಗೆ ಒಬ್ಬನ್ನ ಕೊಂದ್ರು ಅಂತ ನಮ್ಮ ಮಾನವ ಅಕ್ಕುಗಳ ಓರಾಟಗಾರರು, ಬುದ್ಧಿ ಜೀವಿಗಳು, ಪ್ರಗತಿಪರ ಐನಾತಿ ಚಿಂತಕರು ಎಲ್ಲಾ ಒಟ್ಗೆ ಸೇರಿ ಹಸ ಮಾಂಸ ತಿಂದಾವ್ರೆ ಕಣಣ್ಣಾ ನಿಮ್ಮ ಪುಟ್ಟಣ್ಣ ಚೆಟ್ಟಿ ಟೌನಾಲ್ ಮುಂದೆ….

ಅಗಳಗಳೋ ಕೋಳಿ… ಬುಡ್ಲಾ ಪ್ರತಿಭಟನಾ ಅಕ್ಕು ಎಲ್ರಿಗೂ ಇದೆ ಕಣೋ ನಮ್ಮ ಸಮ್ಮ್ವಿಧಾನದಲ್ಲಿ. ಹಸನಾದ್ರೂ ತಿನ್ಲಿ, ಕಕ್ಕಾನಾದ್ರೂ ತಿನ್ಲಿ ನಮಗ್ಯಾತಕ್ಲಾ??? ಅಮೇಲೆ ತಿಂದಿದ್ ಕಕ್ಕಳ್ತಾವೆ. ಬುಟ್ಟಾಕ್ಲಾ.. ಬಡ್ಡೆತಾವ್ ಮಜಾ ಮಾಡ್ಕೋಳ್ಳಿ…

ಅಲ್ಲಾ ಗ್ವಾಪಾಲಣ್ಣೋ ರಾಉಲ್ಲು ಗಾಂಧಿ ಹಾವೇರಿ ಸಮಾವೇಸಕ್ಕೆ ಬಾಳ ಜನ ಸೇರವ್ರಂತೆ?? ರೈತ್ರ ಬೆಳೆ ನಾಸ ಮಾಡ್ಸಿ ಬೃಹತ್ತ್ ಸ್ಟೇಜ್ ಹಾಕಾವ್ರಂತೆ. ಆ ಸ್ಟೇಜ್ನಾಗೆ ನಿಂತ್ ನಿಮ್ಮ್ ರಾಉಲ್ಲು, ಶಿದ್ದಣ್ಣ ವೀರಾವೇಸ್ದಿಂದ ಮಾಡವ್ರೆ ಅಂತೆ???…. ಭಾಸ್ನಾನ!!!

ಊ ಕಣ್ಲಾ ಕೋಳೀ. ರಾಉಲ್ಲು ನಿಮ್ಮ್ ರಮ್ಮು ಊರಾದ ಮಂಡ್ಯಕ್ಕೂ ಬಂದೈತೆ. ರಮ್ಮು ಅಂಬಿ ಮಾಮಂಗೆ ಬತ್ತಿ ಇಟ್ಟು ತನ್ನ ಇಮೇಜ್ ಎಚ್ಚಿಸ್ಕಂಡೈತಂತೆ ಪಾರ್ಟಿನಲ್ಲಿ ಅಂತಾ ಸುದ್ದಿ ಬಂದೈತೆ!!!

ಮಿಸ್ಟರ್ ಕೋಳಿ ಮುರುಗನ್ ಹೌದೇನ್ಲಾ. ಒಂದು ವಿಸ್ಯಾ ಕೇಳ್ಪಟ್ಟೆ. ನಿಮ್ಮ್ ಕುಮಾರಣ್ಣಂದು ರಾಧಿಕಾ ಮೇಡಮ್ ದೂ ಸಂಬಂಧದಲ್ಲಿ ಇರಸ ಮೂಡ್ಬುಟ್ಟೈತೆ. ಪಿರುತಿ ಕಮ್ಮಿ ಆಗ್ಬಿಟ್ಟು ರಾಧಿಕಾ ಸ್ವಾಮಿ ಮಂಗ್ಳೂರ್’ದಾಗೆ ಸೆಟ್ಲ್ ಆಗ್ಬುಟೈತೆ ಅಂತೆ?? ಹೇಳ್ಲಾ ಕರ್ರೆಕ್ಟ್ ಆಗಿ ಏನ್ ಸಮಾಚಾರ ಅಂತಾ??

ಸುಮ್ಕಿರು ಗೋಪಾಲಣ್ಣ. ದೊಡ್ಡೋರ ಇಚಾರ ಕಣ್ಲಾ ಅದು. ಹಂಗೆಲ್ಲಾ ಹಗುರ್ವಾಗಿ ಮಾತಾಡ್ ಬುಡ್ಬೇಡಾ ಅಂತ ಕಣ್ಣ್ ಕೆಂಪಗೆ ಮಾಡಿ ಒಂದೇ ಉಸ್ರಲ್ಲಿ ಹೇಳ್ತು ಮುರುಗನ್.

ಕೂಲ್ ಡೌನ್, ಮಿ. ಮುರುಗನ್ ಕ್ವಾಪ ಮಾಡ್ಕೋಬೇಡ. ಹಂಗೇ ಬಾಯ್ಚಪಲ. ಅದ್ಕೆ ಕೇಳ್ಬುಟ್ಟೆ!!! ಅದೆಲ್ಲಾ ಸರಿ. ಇತ್ತೀಚಿಗೆ ಕಲ್ಲೇಶಿ ಯಾಕ್ಲಾ ಕಟ್ಟೆ ಹತ್ರ ಬರ್ತಾ ಇಲ್ಲಾ?? ಏನ್ಲಾ ಮ್ಯಾಟರ್ರ್???..ಅಂತು ಗೋಪಾಲಣ್ಣ.

ಓಹೋ ಅದಾ ಇಸ್ಯಾ??? ಕಲ್ಲೇಶಿನೂವೆ ನಿಮ್ಮ್ ಬಗ್ವಾನ್ ತರಾನೆ ಒಂದು ಪುಸ್ತಕ ಬರೀತಾವ್ನೆ ಕಣಣ್ಣಾ. ಸಿದ್ದಣ್ಣಂಗೇಳಿ ೨೦೧೭ ಕ್ಕೆ ಸಾಯಿತ್ಯ ಅಕಾಡೆಮಿ ಪ್ರೈಜು ಕೊಡ್ಸ್ತೀನಿ ಅಂತಾ ಮಟ್ಟು ಹೇಳವ್ನಂತೆ..

ಮೆಟ್ ತಗೊಂಡೊಡೀರಿ ನನ್ನ ಮಗನ ಮಖಕ್ಕೇ.. ಅವ್ನಂತ ಅಡ್ನಾಡಿ ನನ್ನ್ ಮಗ ಬರ್ಯೋ ಪುಸ್ತಕಕ್ಕೂ ಪ್ರೈಜು ಸಿಗುತ್ತೇನ್ಲಾ. ಸಾಯಿತಿಗಳೆಲ್ಲಾ ಸಿಕ್ಕಿದ್ ಪ್ರೈಜ್ನ ವಾಪಸ್ ಮಾಡ್ತಿರೋವಾಗ  ವರ್ಸ್ಕೊಳಕ್ಕೆ ಆಗ್ದಷ್ಟು ಮಕಕ್ಕುಗ್ದು ಉಪ್ಪಿನ್ಕಾಯಿ ಆಕಿದ್ರೂ ಅವಾರ್ಡು ತಗೊಳತ್ತಾ ಬಗ್ವಾನ್? ಅದ್ಕೇ ಕಣ್ಲಾ ಬ್ರಹ್ಮಾಂಡ ಗುರುಗ್ಳೇಳಿದ್ದು, ೨೦೧೫ಕ್ಕೆ ಪ್ರಪಂಚದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ. ಮುಂಡಾ ಮುಚ್ಚೋಗುತ್ತೆ ಪ್ರಾರಬ್ಧ ಮುಂಡೇವಾ ಅಂತ. ಅವಾಗ್ ಯಾರೂ ನಂಬಿಲ್ಲ. ಇವಾಗ್ ಅವ್ರ ಮಾತಿನ ಇಪೆಕ್ಟ್ ಗೊತ್ತಾಗ್ತಿದೆ ನೋಡ್ಲಾ… ಅಂತಾ ಹೇಳ್ತು ಗ್ವಾಪಾಲಣ್ಣ ಭಾಳ ಪೀಲಿಂಗ್ ನಲ್ಲಿ!!!

ಮೈಸೂರ್ ದಸರಾ ಎಂಗೆ ನಡ್ಸೋಣಾ ಅಂತಾ ರಾಜಕುಟುಂಬದವ್ರು ಸಲಹೆ ಸೂಚ್ನೆ ಕೇಳವ್ರೆ. ಮೈಸೂರ್ ಪಾಕ್ ತಿಂದು ಸ್ಯಾಣೆ ಟೇಮ್ ಆತು. ನಡೀಲಾ ಎತ್ತಲಾ ನಿನ್ನ್ ಗಾಡೀನ. ಮೈಸೂರ್ ಬಸ್ ಹತ್ತೋಣ… ಸಿವನೇ ಸಂಬುಲಿಂಗಾ!!! ಅಂತೇಳಿ ಜಾಗ ಖಾಲಿ ಮಾಡ್ತು ಗೋಪಾಲಣ್ಣ…!!

 

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post