Author - Harish mambady

Featured ಅಂಕಣ

ಸತ್ಯದ ಬೇರುಗಳ ಅನ್ವೇಷಣೆಯ ನಡುವೆ

ಹೊಸ ವರ್ಷ ಬಂದಾಗ ಹಲವರು ಹೊಸ ಪ್ರತಿಜ್ಞೆ ಮಾಡುತ್ತಾರೆ. ಹಳೆಯದನ್ನು ಮರೆಯುತ್ತಾರೆ. ಅಲ್ಲೇ ಸುಳ್ಳಿನ ಮೂಟೆಯೊಂದನ್ನು ಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಸತ್ಯದ ಬೇರುಗಳು ಎಲ್ಲೆಲ್ಲೋ ಹುದುಗಿಕೊಂಡಿರುತ್ತದೆ. ಹುಡುಕುತ್ತೀರಾ? ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ...

ವಾಸ್ತವ

ಈ ಧಾವಂತದಲ್ಲಿ ಸಾಧಿಸುವುದು ಏನನ್ನು?

ಮೊನ್ನೆ ಮಂಗಳೂರಿಗೆ ಹೋಗಿದ್ದೆ. ಅಲ್ಲಿಂದ  ಕೆ.ಪಿ.ಟಿ ಮೂಲಕ ಪದುವಾ ಹೈಸ್ಕೂಲ್ ಬಳಿ ಸಾಗಿ ನಂತೂರು ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಬೇಕು. ಹೀಗಾಗಿ ನಾನು ಎಡ ಭಾಗದಲ್ಲೇ ಸಾಗುತ್ತಿದ್ದೆ. ನನ್ನ ಎದುರಿಗಿರುವ ವಾಹನ ಮುಂದೆ ಹೋದಂತೆ ನಾನೂ ಮುಂದೆ ಹೋಗುತ್ತಿದ್ದೆ. ವಿಪರೀತ ವಾಹನದಟ್ಟಣೆ ಬೇರೆ. ಎಲ್ಲಿಂದಲೋ ಕರ್ಕಶ ಹಾರ್ನ್ ಕೇಳಿದಂತಾಯಿತು. ನೋಡುವಾಗ ಹಿಂದಿನಿಂದ ಬಸ್ ಒಂದರ...

ವಾಸ್ತವ

ಮಾತಾಡೋವಾಗ ಜಾಗ್ರತೆ ಸ್ವಾಮಿ, ಮಕ್ಕಳೂ ನೋಡ್ತಾರೆ….!

ನೀವು ನಾಟಕ, ಯಕ್ಷಗಾನ ಇತ್ಯಾದಿಗಳನ್ನು ನೋಡುತ್ತೀರಾ?ಅದರಲ್ಲೂ ಪೌರಾಣಿಕ ನಾಟಕವೊ ಅಥವಾ ಯಕ್ಷಗಾನವನ್ನೋ ಸರಿಯಾಗಿ ಆಸ್ವಾದಿಸುವವರಾದರೆ ಈ ಪ್ರಶ್ನೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ (ವಿಶಾಲ ಅರ್ಥದಲ್ಲಿ ಹೇಳಿದ್ದು) ಅಥವಾ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ನೋಡುವುದೆಂದರೆ ಎಲ್ಲರಿಗೂ ಖುಷಿ. ಅದರಲ್ಲೂ ಪೌರಾಣಿಕ ಯಕ್ಷಗಾನ...

ಅಂಕಣ ವಾಸ್ತವ

ದೇಶವನ್ನು ಬಾಯಿಗೆ ಬಂದಂತೆ ಟೀಕಿಸುವುದು ಸುಲಭ. ಸಮಾಜಕ್ಕೆ ಒಂದಾದರೂ...

ಇವತ್ತು ಬೆಳಗ್ಗೆ ದೂರವಾಣಿ ಕರೆಯೊಂದು ಬಂತು. ‘ನೀವು ಪತ್ರಕರ್ತರಲ್ವಾ’ ‘ಹೌದು’ ‘ನೀವೆಂಥದ್ದು ಮಾರಾಯ್ರೇ, ನೋಡುದಿಲ್ವಾ, ಪ್ರತಿ ದಿನ ಬೆಳಗ್ಗೆ ಟ್ಯೂಬ್ ಲೈಟ್ ಉರೀತದೆ, ನಾನು ವಾಕಿಂಗ್ ಮಾಡುವಾಗ ಯಾವಾಗಲೂ ಬೆಳಕು ಹರಿದಾಗಲೂ ಉರೀತಾನೇ ಇರ್ತದೆ. ಇಂಥದ್ದನ್ನೆಲ್ಲಾ ಪೇಪರ್ ನಲ್ಲಿ ಹಾಕಬೇಕು ಮಾರಾಯ್ರೇ, ಎಷ್ಟೊಂದು ವೇಸ್ಟ್ ಗೊತ್ತುಂಟಾ’ ‘ಹೌದಾ’ ನಾನಂದೆ. ಅವರು ಮಾತನ್ನು...

ಅಂಕಣ ವಾಸ್ತವ

ಕೌಟುಂಬಿಕ ಸಂಬಂಧಕ್ಕೂ ಪಾಶ್ಚಾತ್ಯರ ಕರಿನೆರಳು

ಇದೊಂದು ಪತ್ರಿಕಾ ವರದಿ. ಬಳಕೆದಾರರ ಪರ ಸದಾ ನಿಲ್ಲುವ ಹಿರಿಯ ಸ್ನೇಹಿತ ಡಿ.ಕೆ. ಭಟ್ ಮೊನ್ನೆ ಗಮನ ಸೆಳೆದಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾಗಿದ್ದ (ಇತರೆಡೆಯೂ ಬಂದಿರುತ್ತೆ) ವರದಿ ಹೀಗಿತ್ತು. ಅದರ ಸಂಗ್ರಹಿತ ವಿವರ ಹೀಗಿದೆ. ಕೋಲ್ಕತ್ತದ ಹೈಕೋರ್ಟಿನ ಇತ್ತೀಚಿನ ಆದೇಶ ಸಾವಿರಾರು ವೃದ್ಧರ ಪಾಲಿಗೆ ಆಶಾಕಿರಣವಾಗಿದೆ. ಇದು ಮನೆಯಿಂದ ಹೊರ ಹಾಕಲ್ಪಟ್ಟ...

ವಾಸ್ತವ

ಬೆಟ್ಟದಷ್ಟು ಕಿರಿಯ, ನೆಲದಷ್ಟು ಎತ್ತರ

ಸಮಾನತೆಯ ಈ ಯುಗದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಸೌಜನ್ಯಪೂರ್ವಕ ನಡವಳಿಕೆ ರೂಢಿಸಿಕೊಳ್ಳುವುದು ಇಂದಿನ ಅಗತ್ಯ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೈಸ್ಕೂಲ್ ವಿದ್ಯಾರ್ಥಿಗಳು ಅದರಲ್ಲೂ ಪರಿಶಿಷ್ಟ ಜಾತಿ, ವರ್ಗದ ಹತ್ತನೇ ತರಗತಿಯ ಮಕ್ಕಳು ಜಾಸ್ತಿ ಇದ್ದ ಸಮಾರಂಭವದು. ಹೈಸ್ಕೂಲಿನ ಮಕ್ಕಳು ತಾಂತ್ರಿಕ...

Featured ವಾಸ್ತವ

ಅಮಲು ದಾರಿಗಳಿಂದ ಹೆಜ್ಜೆ ಬದಲಿಸೋಣ

ಡಿಸೆಂಬರ್ 31 ಆದೊಡನೆ ಅಮಲು ಸೇವಿಸಿ ಕುಣಿದು ಕುಪ್ಪಳಿಸುವ ಮಂದಿಯೇ ಹೊಸ ವರ್ಷಕ್ಕೆ ಮಾದಕ ವ್ಯಸನಿಗಳಾಗೋದಿಲ್ಲ ಎಂಬ ಪ್ರತಿಜ್ಞೆ ಮಾಡುವಿರಾ? ಈ ಘಟನೆ ನಡೆದು ಸುಮಾರು 15 ವರ್ಷಗಳಾದವು. ಆಗ ನಾನು ಶಿಕ್ಷಣದ ಕಾಶಿ ಎಂಬಂಥ ಜಾಗದಲ್ಲಿ ಉದ್ಯೋಗದಲ್ಲಿದ್ದೆ. ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳದ್ದೇ ಪಾರಮ್ಯ. ಕೆಲವೊಮ್ಮೆ ಹಸಿವಾದಾಗ ರಾತ್ರಿ ಊಟಕ್ಕೂ...

ಅಂಕಣ ಆಕಾಶಮಾರ್ಗ

ಸೆಲ್ಫೀ ಕ್ಲಿಕ್, ಅಪಾಯದ ಲುಕ್

ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ ಅದ್ಭುತ ಲುಕ್….! ಲೋ ತೆಗಿಯೋ ಫೊಟೋ, ನಾನಿಲ್ಲಿ ನಿಂತ್ಕೋತೀನಿ ಎಂದ ಶ್ರೀನಿವಾಸ (ಹೆಸರು ಬದಲಿಸಿದೆ)...

ಅಂಕಣ ವಾಸ್ತವ

ಜನರ ತಲುಪದ ಸಮಾರಂಭಗಳು

ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯಲ್ಲಿ ಎಡವುತ್ತಿದ್ದಾರೋ? ಇವತ್ತು ರಜೆ ಅಂದಾಗಲೇ ಯಾಕೆ ಎಂದು ಕೇಳುವ ಜನರು ನಮ್ಮಲ್ಲಿದ್ದಾರೆ. ಇಂಥ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು, ಮಹಾಪುರುಷರ ಸ್ಮರಣೆ ಮಾಡುವುದು ಅಗತ್ಯವೂ ಹೌದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ನಾವು ಮರೆಯಲೂ ಬಾರದು...

ಅಂಕಣ ಆಕಾಶಮಾರ್ಗ

ದೌಲತ್ತಿನ ಅಹಂಕಾರಕ್ಕೆ ಬಲಿಯಾದವರೆಷ್ಟೋ?

1999ರ ಏಪ್ರಿಲ್ 29ರಂದು ನಡೆದ ಘಟನೆ. ದಕ್ಷಿಣ ದೆಹಲಿಯಲ್ಲಿ ರೆಸ್ಟಾರೆಂಟ್ ಒಂದರಲ್ಲಿ ಪರಿಚಾರಿಕೆಯಾಗಿದ್ದ ಜೆಸ್ಸಿಕಾ ಲಾಲ್ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ. ಅದೇ ಹೊತ್ತಿನಲ್ಲಿ ರೆಸ್ಟಾರೆಂಟ್ ಗೆ ಬಂದಿದ್ದ ಕೆಲ ರಾಜಕಾರಣಿಗಳ ಮಕ್ಕಳು ಮದ್ಯ ಸರಬರಾಜು ಬೇಕು ಎಂದು ಈ ಹುಡುಗಿಗೆ ಆದೇಶಿಸಿದರು. ಸಾರಿ ಸರ್, ಈಗಾಗಲೇ ಸಮಯ ಮೀರಿದೆ ನಮ್ಮಲ್ಲಿ ಮದ್ಯವೂ ಖಾಲಿಯಾಯಿತು...